ಗ್ರಾಮದ ರೈತರಾದ ರಾಮಚಂದ್ರಯ್ಯ, ಯೋಗೇಶ್ ಕುಮಾರ್, ಮುದ್ದಹನುಮೇಗೌಡರ ಮನವಿಯ ಮೇರೆಗೆ ಅರಣ್ಯ ಇಲಾಖೆಯವರು ಬೋನು ಇಟ್ಟಿದ್ದರು. ಗುರುವಾರ ಮಧ್ಯಾಹ್ನ 12.30ರಲ್ಲಿ ಚಿರತೆ ಬೋನಿಗೆ ಬಿದ್ದಿದೆ ಎಂದು ವಲಯ ಅರಣ್ಯ ಅಧಿಕಾರಿ ಪುಷ್ಪಾವತಿ.ಆರ್.ಕೆ.ತಿಳಿಸಿದರು. ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಟ್ಟುಬರುವಾಗಿ ತಿಳಿಸಿದರು. ಉಪವಲಯ ಅರಣ್ಯ ಅಧಿಕಾರಿ ಚಿದಾನಂದ್, ಗಾರ್ಡ್ಗಳಾದ ಯತೀಶ್, ಸಿದ್ದರಾಜು ಇದ್ದರು. ಸೆರೆಸಿಕ್ಕ ಚಿರತೆ ನೋಡಲು ಸುತ್ತಲಿನ ಗ್ರಾಮಗಳ ರೈತರು ಬಂದಿದ್ದರು.