ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಕ್ಕೆ ಡಾ.ಮಂಜುನಾಥ್ ಹೊಸಬರು. ಕುಮಾರಸ್ವಾಮಿ, ಯೋಗೇಶ್ವರ್, ಹಿಂದಿನ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಸ್ಪರ್ಧಿಸಬಹುದಿತ್ತಲ್ಲ. ಯಾರೂ ರಾಜಕಾರಣಿ ಸಿಗಲಿಲ್ಲವೇ? ವೈದ್ಯರಾಗಿ ಜನಸೇವೆ ಮಾಡಿಕೊಂಡಿದ್ದ ಡಾ. ಮಂಜುನಾಥ್ ಅವರನ್ನು ಕರೆ ತಂದಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.