ಮುಂಜಾನೆ ಐದರ ವೇಳೆಗೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸರಕು ಹೊತ್ತು ಸಾಗುತ್ತಿದ್ದ ಲಾರಿ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಯಿತು. ಅಪಘಾತದ ರಭಸಕ್ಕೆ ಅಕ್ಕಪಕ್ಕದ ಮೂರು ಕಂಬಗಳು ಧರೆಗೆ ಉರುಳಿದವು. ಸ್ಥಳೀಯರು ಹಾಗೂ ಈ ಮಾರ್ಗವಾಗಿ ಸಂಚರಿಸುತ್ತಿದ್ದ ಇತರೆ ವಾಹನಗಳ ಸವಾರರು ಈ ಬಗ್ಗೆ ಮಾಹಿತಿ ನೀಡಿ ಉಳಿದ ವಾಹನಗಳ ಸಂಚಾರ ತಡೆದರು. ಇದರಿಂದಾಗಿ ಅನಾಹುತ ತಪ್ಪಿತು. ಘಟನೆಯಿಂದಾಗಿ ಕೆಲವು ಕಾಲ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.