<p><strong>ರಾಮನಗರ</strong>: ಮೇಕೆದಾಟು ಪಾದಯಾತ್ರೆಯ ಎರಡನೇ ದಿನವಾದ ಸೋಮವಾರ ಪಾದಯಾತ್ರಿಗರು ಮಧ್ಯಾಹ್ನದ ಹೊತ್ತಿಗೆ ಏಳು ಕಿ.ಮೀ. ಕ್ರಮಿಸಿದ್ದು, ಮಾದಪ್ಪನದೊಡ್ಡಿ ಬಳಿ ಊಟಕ್ಕೆ ಬಿಡುವು ತೆಗೆದುಕೊಂಡಿದ್ದಾರೆ.</p>.<p>ಎರಡನೇ ದಿನ ಪಾದಯಾತ್ರೆಯಲ್ಲಿ ಹಿರಿಯ ನಾಯಕರು ಕಾಣಿಸಿಕೊಳ್ಳಲಿಲ್ಲ. ಸಿದ್ದರಾಮಯ್ಯ ಸಹ ಅನಾರೋಗ್ಯದ ಕಾರಣ ಹಿಂದೆ ಸರಿದರು. ಪಕ್ಷದ ಮುಖಂಡರಾದ ಈಶ್ವರ ಖಂಡ್ರೆ, ವಿನಯ ಕುಲಕರ್ಣಿ , ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್, ಮಾಜಿ ಸಚಿವೆ ಉಮಾಶ್ರೀ , ಶಾಸಕ ನರೇಂದ್ರ ಸ್ವಾಮಿ ಸೇರಿದಂತೆ ಕೆಲವು ಪ್ರಮುಖರಷ್ಟೇ ಹೆಜ್ಜೆ ಹಾಕುತ್ತಿದ್ದಾರೆ.</p>.<p>ಬೆಳಿಗ್ಗೆ 9.30ಕ್ಕೆ ದೊಡ್ಡಾಲಹಳ್ಳಿಯಲ್ಲಿ ಪಾದಯಾತ್ರೆ ಆರಂಭಗೊಂಡಿದ್ದು, ಮಧ್ಯಾಹ್ನ 2.20ರ ವೇಳೆಗೆ ಮಾದಪ್ಪನದೊಡ್ಡಿಯಲ್ಲಿ ವಿರಮಿಸಿತು. ಸಂಜೆ ಇಲ್ಲಿಂದ ಕನಕಪುರ ಪಟ್ಟಣದತ್ತ ಪಾದಯಾತ್ರೆ ಮುಂದುವರಿಯಲಿದೆ.</p>.<p><a href="https://www.prajavani.net/district/dharwad/jagadish-shettar-request-to-drop-mekedatu-padayatre-asks-for-discussion-900672.html" itemprop="url">ಪಾದಯಾತ್ರೆ ಕೈ ಬಿಟ್ಟು ಚರ್ಚೆಗೆ ಬನ್ನಿ: ಜಗದೀಶ ಶೆಟ್ಟರ್ </a></p>.<p>ಈ ದಿನ ಕನಕಪುರ ತಾಲ್ಲೂಕಿನ ಜೊತೆಗೆ ಚಾಮರಾಜನಗರ ಜಿಲ್ಲೆಯಿಂದ ಜನರು ಬಂದಿದ್ದಾರೆ. ನೂರಕ್ಕೂ ಹೆಚ್ಚು ಬಸ್ ಗಳಲ್ಲಿ ಅವರನ್ನು ಕರೆತರಲಾಗಿದೆ.</p>.<p><a href="https://www.prajavani.net/karnataka-news/siddaramaiah-not-well-today-will-not-take-part-mekedatu-padayatre-900664.html" itemprop="url">Mekedatu: ಸಿದ್ದರಾಮಯ್ಯ ವಿಶ್ರಾಂತಿ: ಪಾದಯಾತ್ರೆಗೆ ಗೈರು </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ಮೇಕೆದಾಟು ಪಾದಯಾತ್ರೆಯ ಎರಡನೇ ದಿನವಾದ ಸೋಮವಾರ ಪಾದಯಾತ್ರಿಗರು ಮಧ್ಯಾಹ್ನದ ಹೊತ್ತಿಗೆ ಏಳು ಕಿ.ಮೀ. ಕ್ರಮಿಸಿದ್ದು, ಮಾದಪ್ಪನದೊಡ್ಡಿ ಬಳಿ ಊಟಕ್ಕೆ ಬಿಡುವು ತೆಗೆದುಕೊಂಡಿದ್ದಾರೆ.</p>.<p>ಎರಡನೇ ದಿನ ಪಾದಯಾತ್ರೆಯಲ್ಲಿ ಹಿರಿಯ ನಾಯಕರು ಕಾಣಿಸಿಕೊಳ್ಳಲಿಲ್ಲ. ಸಿದ್ದರಾಮಯ್ಯ ಸಹ ಅನಾರೋಗ್ಯದ ಕಾರಣ ಹಿಂದೆ ಸರಿದರು. ಪಕ್ಷದ ಮುಖಂಡರಾದ ಈಶ್ವರ ಖಂಡ್ರೆ, ವಿನಯ ಕುಲಕರ್ಣಿ , ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್, ಮಾಜಿ ಸಚಿವೆ ಉಮಾಶ್ರೀ , ಶಾಸಕ ನರೇಂದ್ರ ಸ್ವಾಮಿ ಸೇರಿದಂತೆ ಕೆಲವು ಪ್ರಮುಖರಷ್ಟೇ ಹೆಜ್ಜೆ ಹಾಕುತ್ತಿದ್ದಾರೆ.</p>.<p>ಬೆಳಿಗ್ಗೆ 9.30ಕ್ಕೆ ದೊಡ್ಡಾಲಹಳ್ಳಿಯಲ್ಲಿ ಪಾದಯಾತ್ರೆ ಆರಂಭಗೊಂಡಿದ್ದು, ಮಧ್ಯಾಹ್ನ 2.20ರ ವೇಳೆಗೆ ಮಾದಪ್ಪನದೊಡ್ಡಿಯಲ್ಲಿ ವಿರಮಿಸಿತು. ಸಂಜೆ ಇಲ್ಲಿಂದ ಕನಕಪುರ ಪಟ್ಟಣದತ್ತ ಪಾದಯಾತ್ರೆ ಮುಂದುವರಿಯಲಿದೆ.</p>.<p><a href="https://www.prajavani.net/district/dharwad/jagadish-shettar-request-to-drop-mekedatu-padayatre-asks-for-discussion-900672.html" itemprop="url">ಪಾದಯಾತ್ರೆ ಕೈ ಬಿಟ್ಟು ಚರ್ಚೆಗೆ ಬನ್ನಿ: ಜಗದೀಶ ಶೆಟ್ಟರ್ </a></p>.<p>ಈ ದಿನ ಕನಕಪುರ ತಾಲ್ಲೂಕಿನ ಜೊತೆಗೆ ಚಾಮರಾಜನಗರ ಜಿಲ್ಲೆಯಿಂದ ಜನರು ಬಂದಿದ್ದಾರೆ. ನೂರಕ್ಕೂ ಹೆಚ್ಚು ಬಸ್ ಗಳಲ್ಲಿ ಅವರನ್ನು ಕರೆತರಲಾಗಿದೆ.</p>.<p><a href="https://www.prajavani.net/karnataka-news/siddaramaiah-not-well-today-will-not-take-part-mekedatu-padayatre-900664.html" itemprop="url">Mekedatu: ಸಿದ್ದರಾಮಯ್ಯ ವಿಶ್ರಾಂತಿ: ಪಾದಯಾತ್ರೆಗೆ ಗೈರು </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>