<p><strong>ಕನಕಪುರ:</strong> ನಾಡಹಬ್ಬ ದಸರಾ ಪ್ರಯುಕ್ತವಾಗಿ ಅಂಬೇಡ್ಕರ್ ಭವನದಲ್ಲಿ ಹತ್ತು ದಿನಗಳ ಪೌರಾಣಿಕ ನಾಟಕಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಶುಕ್ರವಾರ ಮೊದಲ ದಿನ ‘ಶನಿ ಪ್ರಭಾವ’ ನಾಟಕದೊಂದಿಗೆ ಚಾಲನೆ ದೊರೆಯಿತು. </p>.<p>ಕಬ್ಬಾಳಮ್ಮ ವಿವಿಧೋದ್ದೇಶ ಪೌರಾಣಿಕ ಮತ್ತು ಸಾಂಸ್ಕೃತಿಕ ಕಲಾ ಟ್ರಸ್ಟ್ ಹಾಗೂ ಆಂಜನೇಯ ಸ್ವಾಮಿ ಕಲಾ ಬಳಗ ಜಂಟಿಯಾಗಿ ನಾಟಕ ಪ್ರದರ್ಶನ ಏರ್ಪಡಿಸಿದೆ. </p>.<p>ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಮರಳೆ ಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ, ನಾಡಿನ ಸಂಸ್ಕೃತಿ, ಪರಂಪರೆ, ಜೀವನದ ಮೌಲ್ಯದೊಂದಿಗೆ ಸಮಾಜಕ್ಕೆ ಒಳ್ಳೆಯ ಸಂದೇಶ, ಮನೋರಂಜನೆ ನೀಡುವ ಸಾಮಾಜಿಕ ಮಾಧ್ಯಮವೇ ನಾಟಕ ಎಂದರು.</p>.<p>ಹಿಂದಿನ ಕಾಲದಲ್ಲಿ ಚಲನಚಿತ್ರ, ಟಿವಿ ಮಾಧ್ಯಮ ಇರಲಿಲ್ಲ. ನಾಟಕಗಳೇ ಬಹುದೊಡ್ಡ ಮನರಂಜನೆ ಮಾಧ್ಯಮಗಳಾಗಿದ್ದವು. ಸಾವಿರಾರು ರಂಗ ಕಲಾವಿದರು ನಾಟಕವನ್ನು ಮುಖ್ಯ ಭೂಮಿಕೆಯಾಗಿಸಿಕೊಂಡಿದ್ದರು. ಬದಲಾದ ಪರಿಸ್ಥಿತಿಯಿಂದ ನಾಟಕ ಕಂಪನಿ ಮತ್ತು ಕಲಾವಿದರಿಗೆ ಹಿನ್ನಡೆಯಾಗಿದೆ. ನಾಟಕಗಳನ್ನು ಪ್ರೋತ್ಸಾಹಿಸುವ ಮೂಲಕ ನಾಟಕ ಸಂಸ್ಕೃತಿಯನ್ನು ಉಳಿಸಬೇಕು ಎಂದರು. </p>.<p>ಸ್ಥಳೀಯ ಕಲಾವಿದರು ಅಂಬೇಡ್ಕರ್ ಭವನದಲ್ಲಿ 10 ದಿನ ನಾಟಕ ಪ್ರದರ್ಶನ ಮಾಡಲಿದ್ದಾರೆ. ಪ್ರತಿದಿನವೂ 3 ತಾಸು ನಾಟಕ ಪ್ರದರ್ಶನವಾಗಲಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎನ್.ರಾಮು ಮಾಹಿತಿ ನೀಡಿದರು.</p>.<p><strong>ಯಾವ ದಿನ ಯಾವ ನಾಟಕ?</strong></p><p>ಸ್ಥಳೀಯ ಕಲಾವಿದರು ಅಭಿನಯಿಸಿದ ಪೌರಾಣಿಕ ನಾಟಕಗಳ ಪ್ರದರ್ಶನ ಅ.14 ರವರೆಗೆ ನಡೆಯಲಿದೆ. ಅ.5: ಧರ್ಮರಾಜ ಪ್ರತಿಷ್ಠಾಪನೆ ಅ.6: ಕುರುಕ್ಷೇತ್ರ ಅ.711 ಮತ್ತು 14: ಶ್ರೀ ಕೃಷ್ಣ ಸಂಧಾನ ಅ.912: ದಕ್ಷ ಯಜ್ಞಂಅ.10: ಬೃಗುಮುನಿ ಗರ್ವಭಂಗಅ.13: ಗೀತೋಪದೇಶ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ:</strong> ನಾಡಹಬ್ಬ ದಸರಾ ಪ್ರಯುಕ್ತವಾಗಿ ಅಂಬೇಡ್ಕರ್ ಭವನದಲ್ಲಿ ಹತ್ತು ದಿನಗಳ ಪೌರಾಣಿಕ ನಾಟಕಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಶುಕ್ರವಾರ ಮೊದಲ ದಿನ ‘ಶನಿ ಪ್ರಭಾವ’ ನಾಟಕದೊಂದಿಗೆ ಚಾಲನೆ ದೊರೆಯಿತು. </p>.<p>ಕಬ್ಬಾಳಮ್ಮ ವಿವಿಧೋದ್ದೇಶ ಪೌರಾಣಿಕ ಮತ್ತು ಸಾಂಸ್ಕೃತಿಕ ಕಲಾ ಟ್ರಸ್ಟ್ ಹಾಗೂ ಆಂಜನೇಯ ಸ್ವಾಮಿ ಕಲಾ ಬಳಗ ಜಂಟಿಯಾಗಿ ನಾಟಕ ಪ್ರದರ್ಶನ ಏರ್ಪಡಿಸಿದೆ. </p>.<p>ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಮರಳೆ ಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ, ನಾಡಿನ ಸಂಸ್ಕೃತಿ, ಪರಂಪರೆ, ಜೀವನದ ಮೌಲ್ಯದೊಂದಿಗೆ ಸಮಾಜಕ್ಕೆ ಒಳ್ಳೆಯ ಸಂದೇಶ, ಮನೋರಂಜನೆ ನೀಡುವ ಸಾಮಾಜಿಕ ಮಾಧ್ಯಮವೇ ನಾಟಕ ಎಂದರು.</p>.<p>ಹಿಂದಿನ ಕಾಲದಲ್ಲಿ ಚಲನಚಿತ್ರ, ಟಿವಿ ಮಾಧ್ಯಮ ಇರಲಿಲ್ಲ. ನಾಟಕಗಳೇ ಬಹುದೊಡ್ಡ ಮನರಂಜನೆ ಮಾಧ್ಯಮಗಳಾಗಿದ್ದವು. ಸಾವಿರಾರು ರಂಗ ಕಲಾವಿದರು ನಾಟಕವನ್ನು ಮುಖ್ಯ ಭೂಮಿಕೆಯಾಗಿಸಿಕೊಂಡಿದ್ದರು. ಬದಲಾದ ಪರಿಸ್ಥಿತಿಯಿಂದ ನಾಟಕ ಕಂಪನಿ ಮತ್ತು ಕಲಾವಿದರಿಗೆ ಹಿನ್ನಡೆಯಾಗಿದೆ. ನಾಟಕಗಳನ್ನು ಪ್ರೋತ್ಸಾಹಿಸುವ ಮೂಲಕ ನಾಟಕ ಸಂಸ್ಕೃತಿಯನ್ನು ಉಳಿಸಬೇಕು ಎಂದರು. </p>.<p>ಸ್ಥಳೀಯ ಕಲಾವಿದರು ಅಂಬೇಡ್ಕರ್ ಭವನದಲ್ಲಿ 10 ದಿನ ನಾಟಕ ಪ್ರದರ್ಶನ ಮಾಡಲಿದ್ದಾರೆ. ಪ್ರತಿದಿನವೂ 3 ತಾಸು ನಾಟಕ ಪ್ರದರ್ಶನವಾಗಲಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎನ್.ರಾಮು ಮಾಹಿತಿ ನೀಡಿದರು.</p>.<p><strong>ಯಾವ ದಿನ ಯಾವ ನಾಟಕ?</strong></p><p>ಸ್ಥಳೀಯ ಕಲಾವಿದರು ಅಭಿನಯಿಸಿದ ಪೌರಾಣಿಕ ನಾಟಕಗಳ ಪ್ರದರ್ಶನ ಅ.14 ರವರೆಗೆ ನಡೆಯಲಿದೆ. ಅ.5: ಧರ್ಮರಾಜ ಪ್ರತಿಷ್ಠಾಪನೆ ಅ.6: ಕುರುಕ್ಷೇತ್ರ ಅ.711 ಮತ್ತು 14: ಶ್ರೀ ಕೃಷ್ಣ ಸಂಧಾನ ಅ.912: ದಕ್ಷ ಯಜ್ಞಂಅ.10: ಬೃಗುಮುನಿ ಗರ್ವಭಂಗಅ.13: ಗೀತೋಪದೇಶ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>