<p><strong>ಕನಕಪುರ: </strong>ಕೋವಿಡ್ ಸೋಂಕು ತಡೆಗಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದಿದ್ದ ಜನತೆ ವ್ಯಾಕ್ಸಿನ್ ಸಿಗದೆ ಪರದಾಡಿದ್ದು ಭಾನುವಾರ ನಗರದಲ್ಲಿ ನಡೆಯಿತು.</p>.<p>ಇಲ್ಲಿನ ಗೂಡಿನ ಮಾರುಕಟ್ಟೆ ಪಕ್ಕದಲ್ಲಿರುವ ನಗರ ಆಸ್ಪತ್ರೆ ಮತ್ತು ಮೇಗಳ ಬೀದಿಯಲ್ಲಿರುವ ಐಪಿಪಿ ಆಸ್ಪತ್ರೆಗೆ ನೂರಾರು ಮಂದಿ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬೆಳಿಗ್ಗೆಯೇ ಬಂದಿದ್ದು ಆಸ್ಪತ್ರೆ ಸಿಬ್ಬಂದಿ ಲಸಿಕೆ ಲಭ್ಯವಿಲ್ಲವೆಂದು ಹೇಳಿದ್ದು ಬೇಸರ ತರಿಸಿತು.</p>.<p>ಇಷ್ಟು ದಿನ ಸರ್ಕಾರದ ವತಿಯಿಂದ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರಚಾರ ನಡೆಸಿ ಒತ್ತಾಯ ಮಾಡಲಾಗುತ್ತಿದ್ದು, ಆರೋಗ್ಯ ಸಿಬ್ಬಂದಿ ಮೂಲಕ ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡಲಾಗುತಿತ್ತು.</p>.<p>ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ಸೋಂಕು ತಗಲುವುದು ತೀರ ಕಡಿಮೆ ಎಂಬ ತಜ್ಞರ ಮಾಹಿತಿಯಿಂದ ಎಚ್ಚೆತ್ತ ಜನರು ಸ್ವಯಂ ಪ್ರೇರಣೆಯಿಂದ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಸದ್ಯಕ್ಕೆ ಲಸಿಕೆ ಸಿಗುತ್ತಿಲ್ಲವೆಂಬುದು ಜನರಲ್ಲಿ ಗೊಂದಲ ಸೃಷ್ಟಿಸಿದೆ.</p>.<p>ಆರೋಗ್ಯ ಇಲಾಖೆಯ ಲಸಿಕಾ ಉಗ್ರಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ರೋಹಿತ್ ಮಾತನಾಡಿ, ಸದ್ಯಕ್ಕೆ ರಾಮನಗರ ಜಿಲ್ಲಾ ಕೇಂದ್ರದಿಂದ ಸ್ಟಾಕ್ ಬಂದಿಲ್ಲ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ: </strong>ಕೋವಿಡ್ ಸೋಂಕು ತಡೆಗಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದಿದ್ದ ಜನತೆ ವ್ಯಾಕ್ಸಿನ್ ಸಿಗದೆ ಪರದಾಡಿದ್ದು ಭಾನುವಾರ ನಗರದಲ್ಲಿ ನಡೆಯಿತು.</p>.<p>ಇಲ್ಲಿನ ಗೂಡಿನ ಮಾರುಕಟ್ಟೆ ಪಕ್ಕದಲ್ಲಿರುವ ನಗರ ಆಸ್ಪತ್ರೆ ಮತ್ತು ಮೇಗಳ ಬೀದಿಯಲ್ಲಿರುವ ಐಪಿಪಿ ಆಸ್ಪತ್ರೆಗೆ ನೂರಾರು ಮಂದಿ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬೆಳಿಗ್ಗೆಯೇ ಬಂದಿದ್ದು ಆಸ್ಪತ್ರೆ ಸಿಬ್ಬಂದಿ ಲಸಿಕೆ ಲಭ್ಯವಿಲ್ಲವೆಂದು ಹೇಳಿದ್ದು ಬೇಸರ ತರಿಸಿತು.</p>.<p>ಇಷ್ಟು ದಿನ ಸರ್ಕಾರದ ವತಿಯಿಂದ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರಚಾರ ನಡೆಸಿ ಒತ್ತಾಯ ಮಾಡಲಾಗುತ್ತಿದ್ದು, ಆರೋಗ್ಯ ಸಿಬ್ಬಂದಿ ಮೂಲಕ ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡಲಾಗುತಿತ್ತು.</p>.<p>ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ಸೋಂಕು ತಗಲುವುದು ತೀರ ಕಡಿಮೆ ಎಂಬ ತಜ್ಞರ ಮಾಹಿತಿಯಿಂದ ಎಚ್ಚೆತ್ತ ಜನರು ಸ್ವಯಂ ಪ್ರೇರಣೆಯಿಂದ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಸದ್ಯಕ್ಕೆ ಲಸಿಕೆ ಸಿಗುತ್ತಿಲ್ಲವೆಂಬುದು ಜನರಲ್ಲಿ ಗೊಂದಲ ಸೃಷ್ಟಿಸಿದೆ.</p>.<p>ಆರೋಗ್ಯ ಇಲಾಖೆಯ ಲಸಿಕಾ ಉಗ್ರಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ರೋಹಿತ್ ಮಾತನಾಡಿ, ಸದ್ಯಕ್ಕೆ ರಾಮನಗರ ಜಿಲ್ಲಾ ಕೇಂದ್ರದಿಂದ ಸ್ಟಾಕ್ ಬಂದಿಲ್ಲ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>