ಸಂಸ್ಥೆಯ ಆಡಳಿತಾಧಿಕಾರಿ ಅ.ಮಾ.ರುದ್ರಮಾದಪ್ಪ ಮಾತನಾಡಿ, ‘ಸಾಹಿತ್ಯ, ಸಂಸ್ಕೃತಿ ಮತ್ತು ಕ್ರೀಡೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಳಶಪ್ರಾಯವಾದವು. ಸಮಾಜ ಸುಧಾರಕರ ಜೀವನ ಮತ್ತು ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಸಾಮಾಜಿಕ ಕಳಕಳಿ, ಪರಿಸರ ಪ್ರಜ್ಞೆ, ಮೌಢ್ಯ ನಿವಾರಣೆ, ದುಶ್ಚಟಮುಕ್ತ ಜೀವನ ಹಾಗೂ ಜಾತಿ ವಿನಾಶದಂತಹ ಮೌಲ್ಯಯುತ ಅಂಶಗಳತ್ತ ಯುವಜನರು ಗಮನಹರಿಸಬೇಕು’ ಎಂದರು.