‘ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಶಾಸಕರು ಮತ್ತು ಸಂಸದರ ಗಮನಕ್ಕೆ ಸಿಬ್ಬಂದಿ ಕೊರತೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ತರಕಾರಿ, ಇತರ ಸಾಮಾನು ಖರೀದಿಸುವವರು ಕಡ್ಡಾಯವಾಗಿ ಬಟ್ಟೆಯ ಕೈಚೀಲ ಬಳಸಬೇಕು. ತರಕಾರಿ, ಹೂವು, ಬೇಕರಿಗಳಲ್ಲಿ ಪ್ಲಾಸ್ಟಿಕ್ ಕವರ್ ಬಳಸಿದರೆ ಮಂಗಳವಾರದಿಂದಲೇ ದಂಡ ವಿಧಿಸಲಾಗುವುದು’ ಎಂದರು.