ಬುಧವಾರ, 11 ಫೆಬ್ರುವರಿ 2026
×
ADVERTISEMENT
ADVERTISEMENT

ಪರೀಕ್ಷಾ ಸಾಧನೆಗೆ ಪ್ರೇರಣೆಯಾದ ‘ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್’ ಕಾರ್ಯಾಗಾರ

Published : 11 ಫೆಬ್ರುವರಿ 2026, 8:46 IST
Last Updated : 11 ಫೆಬ್ರುವರಿ 2026, 8:46 IST
ಫಾಲೋ ಮಾಡಿ
Comments
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಗಣಿತವೆಂದರೆ ಕಬ್ಬಿಣದ ಕಡಲೆಯಲ್ಲ. ಸಮಾಧಾನದಿಂದ ಸತತವಾಗಿ ಅಭ್ಯಾಸ ಮಾಡಿದರೆ ಹೆಚ್ಚು ಅಂಕ ತಂದುಕೊಡಬಲ್ಲದು. ವಿದ್ಯಾರ್ಥಿಗಳು ವೇಳಾಪಟ್ಟಿ ಹಾಕಿಕೊಂಡುಅಭ್ಯಾಸ ಮಾಡಿದರೆ ಈ ವಿಷಯದಲ್ಲಿ ಶೇ 100ರಷ್ಟು ಅಂಕಗಳನ್ನು ಸುಲಭವಾಗಿ ಪಡೆಯಬಹುದು
– ಎಲ್‌.ಸಿ. ಮಹದೇವಯ್ಯ, ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿ
ಕಾಟಾಚಾರಕ್ಕಾಗಿ ಓದಿದರೆ ಯಾವ ವಿಷಯವೂ ತಲೆಗೆ ಹತ್ತುವುದಿಲ್ಲ. ಬದಲಿಗೆ ಇಷ್ಟಪಟ್ಟು ಓದಿದರೆ ಅದು ವರ್ಷಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ. ನದಿ ನಗರ ಇತಿಹಾಸ ಇಸವಿ ಸೇರಿದಂತೆ ಕೆಲ ಮಾಹಿತಿಗಳನ್ನು ಕೋಡ್ ವರ್ಡ್ ಮೂಲಕ ನೆನಪಿಟ್ಟುಕೊಳ್ಳಬೇಕು
– ಬಾಬು ಕೆ.ಪಿ, ಉಪನ್ಯಾಸಕ ಡಯಟ್ ರಾಮನಗರ
‘ಪ್ರಜಾವಾಣಿ’ಯಲ್ಲಿ ಪ್ರಟಕವಾಗುವ ಎಸ್‌ಎಸ್ಎಲ್‌ಸಿ ಪರೀಕ್ಷಾ ದಿಕ್ಸೂಚಿಯನ್ನು ನಾನು ತಪ್ಪದೆ ಓದುತ್ತೇನೆ. ಪರೀಕ್ಷೆ ತಯಾರಿಗೆ ದಿಕ್ಸೂಚಿ ಜೊತೆಗೆ ಈ ಕಾರ್ಯಾಗಾರವು ಪರೀಕ್ಷಾ ಸಾಧನೆಗೆ ನನಗೆ ಮತ್ತಷ್ಟು ಪ್ರೇರಣೆ ನೀಡಿದೆ
– ಮಾನ್ಯ, ಜಿಜಿಜೆಸಿ ಪ್ರೌಢಶಾಲೆ ರಾಮನಗರ
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಡಿ.ಸಿ ಸರ್ ಜಿ.ಪಂ.ಸಿಇಒ ಸರ್ ಎಸ್‌ಪಿ ಸರ್ ಅವರು ನಮ್ಮೊಂದಿಗೆ ಮುಕ್ತವಾಗಿ ಆಡಿದ ಮಾತುಗಳು ನನಗೆ ಸ್ಫೂರ್ತಿ ತುಂಬಿದವು. ಸುರೇಶ ಗೌಡ ಸರ್ ಮಾತುಗಳು ಪರೀಕ್ಷಾ ಸಾಧನೆಗೆ ಉತ್ಸಾಹ ನೀಡಿವೆ.
– ಸಿಂಚನ, ಭಾರತೀಯ ಸಂಸ್ಕೃತಿ ವಿದ್ಯಾಪೀಠ ಪ್ರೌಢಶಾಲೆ ರಾಮನಗರ
ಪರೀಕ್ಷೆಗೆ ವ್ಯವಸ್ಥಿತವಾಗಿ ಯೋಜನೆ ಹಾಕಿಕೊಂಡು ಒತ್ತಡ ಮಾಡಿಕೊಳ್ಳದೆ ಹೇಗೆ ಓದಬೇಕು ಎಂಬುದು ಗೊತ್ತಾಯಿತು. ಉನ್ನತ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳ ಮಾತುಗಳು ಸಾಧನೆಯ ಮಾರ್ಗ ತೋರಿದವು. ಕಾರ್ಯಾಗಾರದಿಂದ ಹೆಚ್ಚು ಉಪಯುಕ್ತವಾಯಿತು
– ಪ್ರಗತಿ ಕುಮಾರಿ, ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆ ಬಿಡದಿ
ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ನನ್ನ ಆತ್ಮವಿಶ್ವಾಸ ಇಮ್ಮಡಿಗೊಂಡಿದೆ. ಪರೀಕ್ಷಾ ಭಯ ದೂರವಾಗಿದೆ. ಯಾವುದೇ ಆತಂಕವಿಲ್ಲದೆ ನಿರಾಳವಾಗಿ ಪರೀಕ್ಷೆ ಎದುರಿಸಲು ಕಾರ್ಯಾಗಾರವು ಸ್ಫೂರ್ತಿ ತುಂಬಿದೆ. ಚನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆಯುವೆ
- ಪರಿಮಳ, ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆ ಬಿಡದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT