

ಗಣಿತವೆಂದರೆ ಕಬ್ಬಿಣದ ಕಡಲೆಯಲ್ಲ. ಸಮಾಧಾನದಿಂದ ಸತತವಾಗಿ ಅಭ್ಯಾಸ ಮಾಡಿದರೆ ಹೆಚ್ಚು ಅಂಕ ತಂದುಕೊಡಬಲ್ಲದು. ವಿದ್ಯಾರ್ಥಿಗಳು ವೇಳಾಪಟ್ಟಿ ಹಾಕಿಕೊಂಡುಅಭ್ಯಾಸ ಮಾಡಿದರೆ ಈ ವಿಷಯದಲ್ಲಿ ಶೇ 100ರಷ್ಟು ಅಂಕಗಳನ್ನು ಸುಲಭವಾಗಿ ಪಡೆಯಬಹುದು– ಎಲ್.ಸಿ. ಮಹದೇವಯ್ಯ, ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿ
ಕಾಟಾಚಾರಕ್ಕಾಗಿ ಓದಿದರೆ ಯಾವ ವಿಷಯವೂ ತಲೆಗೆ ಹತ್ತುವುದಿಲ್ಲ. ಬದಲಿಗೆ ಇಷ್ಟಪಟ್ಟು ಓದಿದರೆ ಅದು ವರ್ಷಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ. ನದಿ ನಗರ ಇತಿಹಾಸ ಇಸವಿ ಸೇರಿದಂತೆ ಕೆಲ ಮಾಹಿತಿಗಳನ್ನು ಕೋಡ್ ವರ್ಡ್ ಮೂಲಕ ನೆನಪಿಟ್ಟುಕೊಳ್ಳಬೇಕು– ಬಾಬು ಕೆ.ಪಿ, ಉಪನ್ಯಾಸಕ ಡಯಟ್ ರಾಮನಗರ
‘ಪ್ರಜಾವಾಣಿ’ಯಲ್ಲಿ ಪ್ರಟಕವಾಗುವ ಎಸ್ಎಸ್ಎಲ್ಸಿ ಪರೀಕ್ಷಾ ದಿಕ್ಸೂಚಿಯನ್ನು ನಾನು ತಪ್ಪದೆ ಓದುತ್ತೇನೆ. ಪರೀಕ್ಷೆ ತಯಾರಿಗೆ ದಿಕ್ಸೂಚಿ ಜೊತೆಗೆ ಈ ಕಾರ್ಯಾಗಾರವು ಪರೀಕ್ಷಾ ಸಾಧನೆಗೆ ನನಗೆ ಮತ್ತಷ್ಟು ಪ್ರೇರಣೆ ನೀಡಿದೆ– ಮಾನ್ಯ, ಜಿಜಿಜೆಸಿ ಪ್ರೌಢಶಾಲೆ ರಾಮನಗರ
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಡಿ.ಸಿ ಸರ್ ಜಿ.ಪಂ.ಸಿಇಒ ಸರ್ ಎಸ್ಪಿ ಸರ್ ಅವರು ನಮ್ಮೊಂದಿಗೆ ಮುಕ್ತವಾಗಿ ಆಡಿದ ಮಾತುಗಳು ನನಗೆ ಸ್ಫೂರ್ತಿ ತುಂಬಿದವು. ಸುರೇಶ ಗೌಡ ಸರ್ ಮಾತುಗಳು ಪರೀಕ್ಷಾ ಸಾಧನೆಗೆ ಉತ್ಸಾಹ ನೀಡಿವೆ.– ಸಿಂಚನ, ಭಾರತೀಯ ಸಂಸ್ಕೃತಿ ವಿದ್ಯಾಪೀಠ ಪ್ರೌಢಶಾಲೆ ರಾಮನಗರ
ಪರೀಕ್ಷೆಗೆ ವ್ಯವಸ್ಥಿತವಾಗಿ ಯೋಜನೆ ಹಾಕಿಕೊಂಡು ಒತ್ತಡ ಮಾಡಿಕೊಳ್ಳದೆ ಹೇಗೆ ಓದಬೇಕು ಎಂಬುದು ಗೊತ್ತಾಯಿತು. ಉನ್ನತ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳ ಮಾತುಗಳು ಸಾಧನೆಯ ಮಾರ್ಗ ತೋರಿದವು. ಕಾರ್ಯಾಗಾರದಿಂದ ಹೆಚ್ಚು ಉಪಯುಕ್ತವಾಯಿತು– ಪ್ರಗತಿ ಕುಮಾರಿ, ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆ ಬಿಡದಿ
ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ನನ್ನ ಆತ್ಮವಿಶ್ವಾಸ ಇಮ್ಮಡಿಗೊಂಡಿದೆ. ಪರೀಕ್ಷಾ ಭಯ ದೂರವಾಗಿದೆ. ಯಾವುದೇ ಆತಂಕವಿಲ್ಲದೆ ನಿರಾಳವಾಗಿ ಪರೀಕ್ಷೆ ಎದುರಿಸಲು ಕಾರ್ಯಾಗಾರವು ಸ್ಫೂರ್ತಿ ತುಂಬಿದೆ. ಚನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆಯುವೆ- ಪರಿಮಳ, ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆ ಬಿಡದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.