ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಗ್ರಾಮದಲ್ಲಿ ಏ. 19ರಂದು ಈ ಘಟನೆ ನಡೆದಿತ್ತು. ‘ಬಾಲಕೃಷ್ಣ ಕೀ ಜೈ’ ಎಂದು ಕೂಗಿದ್ದ ಘೋಷಣೆಯನ್ನು ‘ಪಾಕಿಸ್ತಾನ್ ಕೀ ಜೈ’ ಎಂದು ತಿರುಚಿ, ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತ ರಾಮಚಂದ್ರಯ್ಯ ಎಂಬುವರು ನೀಡಿದ ದೂರಿನ ಮೇರೆಗೆ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಜೊತೆಗೆ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಸಹ ಘೋಷಣೆ ಕುರಿತು ಠಾಣೆಗೆ ದೂರು ಕೊಟ್ಟಿತ್ತು.