ಸಂತೇಮಾಳದ ಶ್ರೀಬಾಲಾಜಿ ವೆಟ್ ಫಾರ್ಮ್ ಮೆಡಿಕಲ್ ಸ್ಟೋರ್ನ ಮಾಲೀಕ ಮಂಜುನಾಥ್ ಜತೆಗೆ ಬುಧವಾರ ಸಂಜೆ ಯುವಕರು ಜಗಳ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಪಶು ಔಷಧಿ ಕೊಳ್ಳಲು ಬಂದಿದ್ದ ಡಾ.ಗಿರೀಶ್, ಯುವಕರಿಗೆ ಗಲಾಟೆ ಮಾಡಬೇಡಿ. ಸುಮ್ಮನೆ ಹೋಗಿ ಎಂದಿದ್ದಾರೆ. ‘ನಮಗೆ ಬುದ್ಧಿ ಹೇಳಲು ನೀನ್ಯಾರು’ ಎಂದು ಯುವಕರು ಕ್ಯಾತೆ ತೆಗೆದಿದ್ದಾರೆ. ಇದನ್ನು ಗಿರೀಶ್ ತಮ್ಮ ಮೊಬೈಲ್ನಲ್ಲಿ ವಿಡಿಯೊ ಮಾಡಲು ಯತ್ನಿಸಿದಾಗ, ಮೊಬೈಲ್ ಕಿತ್ತುಕೊಂಡ ಯುವಕರು ಹಲ್ಲೆ ಮಾಡಿದ್ದಾರೆ.