<p>ರಾಮನಗರ: ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾದ ತೆಂಗಿಗೆ ಕಪ್ಪುಮೂತಿ ಹುಳುವಿನ ಬಾಧೆ ಹೆಚ್ಚಾಗಿದ್ದು, ಇದರ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆಯು ಪರೋಪಜೀವಿ ಕೀಟಗಳ ಮೊರೆ ಹೋಗಿದೆ.</p>.<p>ಜಿಲ್ಲೆಯ 35,500 ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಮಾವು ನಂತರದ ಪ್ರಮುಖ ತೋಟಗಾರಿಕೆ ಬೆಳೆ ಇದಾಗಿದೆ. ಈ ಪೈಕಿ 1000–1200 ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿನ ತೋಟಕ್ಕೆ ಈಗಾಗಲೇ ಈ ಕಪ್ಪುಹುಳು ದಾಂಗುಡಿ ಇಟ್ಟಿದೆ. ಹುಳುಗಳು ತೆಂಗಿನ ಗರಿಗಳನ್ನು ಮೇಯುವ ಕಾರಣ ಮರಗಳು ಒಣಗಿದಂತೆ ಕಂಡುಬರುತ್ತಿವೆ. ಇದರಿಂದಾಗಿ ಮರಗಳಲ್ಲಿ ಹಸಿರು ಕಡಿಮೆಯಾಗಿ ಆಹಾರೋತ್ಪಾದನೆ ಕುಂಠಿತಗೊಳ್ಳುವ ಕಾರಣ ಒಟ್ಟಾರೆ ಇಳುವರಿ ಕುಸಿತ ಕಾಣುತ್ತಿದೆ ಎನ್ನುತ್ತಾರೆ ಕೃಷಿ ತಜ್ಞರು.</p>.<p class="Subhead">ಎಲ್ಲೆಲ್ಲಿ ತೊಂದರೆ: ಜಿಲ್ಲೆಯ ನಾಲ್ಕೂ ತಾಲ್ಲೂಕಿನಲ್ಲಿಯೂ ಈ ರೋಗ ಬಾಧೆ ಕಾಣಿಸಿಕೊಂಡಿದೆ. ಅದರಲ್ಲಿಯೂ ರಾಮನಗರ ತಾಲ್ಲೂಕಿನ ಬೈರಮಂಗಲ ಸುತ್ತಮತ್ತ, ಚನ್ನಪಟ್ಟಣ ತಾಲ್ಲೂಕಿನ ವಿರೂಪಾಕ್ಷಿಪುರ ಹೋಬಳಿ, ಕನಕಪುರ ತಾಲ್ಲೂಕಿನ ಕೊಳ್ಳಿಗನಹಳ್ಳಿ ಸುತ್ತಲಿನ ತೆಂಗಿನ ತೋಟಗಳಲ್ಲಿ ಈ ಸೋಂಕು ಉಲ್ಬಣಗೊಳ್ಳುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.</p>.<p class="Subhead">ಏನಿದು ಕಪ್ಪುಹುಳು: ಕಪ್ಪುಮೂತಿ ಹುಳು ಅರ್ಥಾತ್ ಕ್ಯಾಟರಿಪಿಲ್ಲರ್ ಚಿಟ್ಟೆಗಳಂತೆ ಹಾರಿ ಬಂದು ತೆಂಗಿನ ಎಲೆಗಳ ತಳಭಾಗದಲ್ಲಿ ತನ್ನ ಹಿಕ್ಕೆ ಹಾಗೂ ನೂಲಿನಿಂದ ನಿರ್ಮಿಸಿದ ಸುರಂಗಗಳಲ್ಲಿ ವಾಸಿಸುತ್ತದೆ. ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ. ಇದರಿಂದ ಹಾನಿ ಹೆಚ್ಚಾದಾಗ ಮರಗಳು ಸುಟ್ಟಂತೆ ಕಂಡು<br />ಬರುತ್ತವೆ.</p>.<p>ಸಸ್ಯದ ದ್ಯುತಿ ಸಂಶ್ಲೇಷಣೆ ನಡೆಯುವ ಪ್ರಮುಖ ಭಾಗವಾದ ಎಲೆಯನ್ನೇ ಹಾಳುಮಾಡಿ ಮರದಿಂದ ಮರಕ್ಕೆ, ತೋಟದಿಂದ ತೋಟಕ್ಕೆ ರೋಗ ಸರಾಗವಾಗಿ ಹಬ್ಬುತ್ತದೆ. ಸಾಮಾನ್ಯವಾಗಿ ವರ್ಷಕ್ಕೆ 5 ಸಂತತಿಗಳನ್ನು ಪೂರ್ಣಗೊಳಿಸುವ ಈ ಹುಳದ ಹತೋಟಿ ಕೈಗೊಳ್ಳದಿದ್ದಲ್ಲಿ ಶೇ 60ರವರೆಗೂ ತೆಂಗಿನ ಇಳುವರಿಯಲ್ಲಿ ಕುಂಠಿತ ಆಗಬಹುದು ಎಂದು ವಿಜ್ಞಾನಿಗಳು<br />ಎಚ್ಚರಿಸುತ್ತಾರೆ.</p>.<p class="Subhead">ಪರಿಹಾರಗಳೇನು?: ಜಿಲ್ಲೆಯ ತೋಟಗಳಲ್ಲಿ ಈ ಕೀಟಬಾಧೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಹೀಗಾಗಿ ಕೆಲವೇ ಗರಿಗಳಲ್ಲಿ ಕಂಡು ಬಂದಾಗ ಬಿದ್ದ ಗರಿಗಳು ಇತರೆ ಕಸ ಕಡ್ಡಿಗಳನ್ನು ಸಂಗ್ರಹಿಸಿ ಸ್ವಚ್ಛ ಮಾಡಬೇಕು. ಹುಳು ಕಂಡುಬರುವ ಗರಿ ಅಥವಾ ಅದರ ಭಾಗಗಳನ್ನು ಮಾತ್ರ ಕತ್ತರಿಸಿ ಸುಡಬಹುದು ಎಂಬುದು ವಿಜ್ಞಾನಿಗಳ ಸಲಹೆ.</p>.<p>ಮುಳ್ಳಿಗೆ ಮುಳ್ಳಿನ ಮದ್ದು: ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎಂಬ ಮಾತಿನಂತೆ ತೆಂಗಿಗೆ ಕಾಟ ಕೊಡುತ್ತಿರುವ ಕೀಟಗಳನ್ನು ಮತ್ತೊಂದು ಕೀಟದಿಂದಲೇ ನಿಯಂತ್ರಣಕ್ಕೆ ತರುವ ಕ್ರಮಕ್ಕೆ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮುಂದಾಗಿದ್ದಾರೆ. ಕೀಟಬಾಧೆಗೆ ರಾಸಾಯನಿಕ ಬಳಕೆಗಿಂತ ಜೈವಿಕ ತಂತ್ರಕ್ಕೆ ಹೆಚ್ಚು ಒತ್ತು<br />ನೀಡಲಾಗುತ್ತಿದೆ.</p>.<p>'ಅಂಥೋಕೋರಿಡ್ಬಗ್' ಎಂಬ ಪರ ಭಕ್ಷಕಗಳನ್ನು ಸಸ್ಯಕಾಶಿ ಲಾಲ್ ಬಾಗ್ನಿಂದ ಉಚಿತವಾಗಿ ತಂದು ಬಿಡುಗಡೆಗೊಳಿಸುವ ವಿಧಾನದಲ್ಲಿ ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆದಿದೆ. ಈ ಪರಾವಲಂಬಿ ಹುಳುಗಳು ಪರಾವಲಂಬಿ ಹುಳುಗಳನ್ನು ತೆಂಗಿನ ಜತೆಗೆ ಬಾದೆ ನೀಡುವ ಕೀಟದ ಮೊಟ್ಟೆಗಳನ್ನು ತಿಂದು ಹುಳುಗಳ ಸಂತಾನೋತ್ಪತ್ತಿನಿಯಂತ್ರಿಸಲಿವೆ.</p>.<p>ಕಪ್ಪುಹುಳುವಿನ ದೇಹದ ಮೊಟ್ಟೆಗಳ ಮೇಲೆ ಮೊಟ್ಟೆಯಿಟ್ಟು ಜೀವನ ಚಕ್ರ ನಡೆಸಿ ಅದರ ಸಂತತಿ ಕೊಲ್ಲುವ ಗೋನಿಯೋಜಸ್ ನೆಫಾಂಟಿಡಿಸ್ ಕೀಟಗಳನ್ನು ತರಿಸಲಾಗುತ್ತಿದೆ. ಅಧಿಕಾರಿಗಳು ಹಾಗೂ ಕೃಷಿ ತಜ್ಞರು ರೈತರ ಜೊತೆಗೂಡಿ ಹಾನಿಯಾಗಿರುವ ಪ್ರದೇಶಗಳಿಗೆ ಕೀಟಗಳನ್ನು ಬಿಡುತ್ತಿದ್ದಾರೆ. ಹೀಗೆ ಒಟ್ಟಾರೆ 3 ಲಕ್ಷದಷ್ಟು ಕೀಟಗಳನ್ನು ತೋಟಗಳಿಗೆ ಬಿಡಲು ಯೋಜಿಸಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವವನ್ನೂಸಲ್ಲಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಮನಗರ: ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾದ ತೆಂಗಿಗೆ ಕಪ್ಪುಮೂತಿ ಹುಳುವಿನ ಬಾಧೆ ಹೆಚ್ಚಾಗಿದ್ದು, ಇದರ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆಯು ಪರೋಪಜೀವಿ ಕೀಟಗಳ ಮೊರೆ ಹೋಗಿದೆ.</p>.<p>ಜಿಲ್ಲೆಯ 35,500 ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಮಾವು ನಂತರದ ಪ್ರಮುಖ ತೋಟಗಾರಿಕೆ ಬೆಳೆ ಇದಾಗಿದೆ. ಈ ಪೈಕಿ 1000–1200 ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿನ ತೋಟಕ್ಕೆ ಈಗಾಗಲೇ ಈ ಕಪ್ಪುಹುಳು ದಾಂಗುಡಿ ಇಟ್ಟಿದೆ. ಹುಳುಗಳು ತೆಂಗಿನ ಗರಿಗಳನ್ನು ಮೇಯುವ ಕಾರಣ ಮರಗಳು ಒಣಗಿದಂತೆ ಕಂಡುಬರುತ್ತಿವೆ. ಇದರಿಂದಾಗಿ ಮರಗಳಲ್ಲಿ ಹಸಿರು ಕಡಿಮೆಯಾಗಿ ಆಹಾರೋತ್ಪಾದನೆ ಕುಂಠಿತಗೊಳ್ಳುವ ಕಾರಣ ಒಟ್ಟಾರೆ ಇಳುವರಿ ಕುಸಿತ ಕಾಣುತ್ತಿದೆ ಎನ್ನುತ್ತಾರೆ ಕೃಷಿ ತಜ್ಞರು.</p>.<p class="Subhead">ಎಲ್ಲೆಲ್ಲಿ ತೊಂದರೆ: ಜಿಲ್ಲೆಯ ನಾಲ್ಕೂ ತಾಲ್ಲೂಕಿನಲ್ಲಿಯೂ ಈ ರೋಗ ಬಾಧೆ ಕಾಣಿಸಿಕೊಂಡಿದೆ. ಅದರಲ್ಲಿಯೂ ರಾಮನಗರ ತಾಲ್ಲೂಕಿನ ಬೈರಮಂಗಲ ಸುತ್ತಮತ್ತ, ಚನ್ನಪಟ್ಟಣ ತಾಲ್ಲೂಕಿನ ವಿರೂಪಾಕ್ಷಿಪುರ ಹೋಬಳಿ, ಕನಕಪುರ ತಾಲ್ಲೂಕಿನ ಕೊಳ್ಳಿಗನಹಳ್ಳಿ ಸುತ್ತಲಿನ ತೆಂಗಿನ ತೋಟಗಳಲ್ಲಿ ಈ ಸೋಂಕು ಉಲ್ಬಣಗೊಳ್ಳುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.</p>.<p class="Subhead">ಏನಿದು ಕಪ್ಪುಹುಳು: ಕಪ್ಪುಮೂತಿ ಹುಳು ಅರ್ಥಾತ್ ಕ್ಯಾಟರಿಪಿಲ್ಲರ್ ಚಿಟ್ಟೆಗಳಂತೆ ಹಾರಿ ಬಂದು ತೆಂಗಿನ ಎಲೆಗಳ ತಳಭಾಗದಲ್ಲಿ ತನ್ನ ಹಿಕ್ಕೆ ಹಾಗೂ ನೂಲಿನಿಂದ ನಿರ್ಮಿಸಿದ ಸುರಂಗಗಳಲ್ಲಿ ವಾಸಿಸುತ್ತದೆ. ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ. ಇದರಿಂದ ಹಾನಿ ಹೆಚ್ಚಾದಾಗ ಮರಗಳು ಸುಟ್ಟಂತೆ ಕಂಡು<br />ಬರುತ್ತವೆ.</p>.<p>ಸಸ್ಯದ ದ್ಯುತಿ ಸಂಶ್ಲೇಷಣೆ ನಡೆಯುವ ಪ್ರಮುಖ ಭಾಗವಾದ ಎಲೆಯನ್ನೇ ಹಾಳುಮಾಡಿ ಮರದಿಂದ ಮರಕ್ಕೆ, ತೋಟದಿಂದ ತೋಟಕ್ಕೆ ರೋಗ ಸರಾಗವಾಗಿ ಹಬ್ಬುತ್ತದೆ. ಸಾಮಾನ್ಯವಾಗಿ ವರ್ಷಕ್ಕೆ 5 ಸಂತತಿಗಳನ್ನು ಪೂರ್ಣಗೊಳಿಸುವ ಈ ಹುಳದ ಹತೋಟಿ ಕೈಗೊಳ್ಳದಿದ್ದಲ್ಲಿ ಶೇ 60ರವರೆಗೂ ತೆಂಗಿನ ಇಳುವರಿಯಲ್ಲಿ ಕುಂಠಿತ ಆಗಬಹುದು ಎಂದು ವಿಜ್ಞಾನಿಗಳು<br />ಎಚ್ಚರಿಸುತ್ತಾರೆ.</p>.<p class="Subhead">ಪರಿಹಾರಗಳೇನು?: ಜಿಲ್ಲೆಯ ತೋಟಗಳಲ್ಲಿ ಈ ಕೀಟಬಾಧೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಹೀಗಾಗಿ ಕೆಲವೇ ಗರಿಗಳಲ್ಲಿ ಕಂಡು ಬಂದಾಗ ಬಿದ್ದ ಗರಿಗಳು ಇತರೆ ಕಸ ಕಡ್ಡಿಗಳನ್ನು ಸಂಗ್ರಹಿಸಿ ಸ್ವಚ್ಛ ಮಾಡಬೇಕು. ಹುಳು ಕಂಡುಬರುವ ಗರಿ ಅಥವಾ ಅದರ ಭಾಗಗಳನ್ನು ಮಾತ್ರ ಕತ್ತರಿಸಿ ಸುಡಬಹುದು ಎಂಬುದು ವಿಜ್ಞಾನಿಗಳ ಸಲಹೆ.</p>.<p>ಮುಳ್ಳಿಗೆ ಮುಳ್ಳಿನ ಮದ್ದು: ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎಂಬ ಮಾತಿನಂತೆ ತೆಂಗಿಗೆ ಕಾಟ ಕೊಡುತ್ತಿರುವ ಕೀಟಗಳನ್ನು ಮತ್ತೊಂದು ಕೀಟದಿಂದಲೇ ನಿಯಂತ್ರಣಕ್ಕೆ ತರುವ ಕ್ರಮಕ್ಕೆ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮುಂದಾಗಿದ್ದಾರೆ. ಕೀಟಬಾಧೆಗೆ ರಾಸಾಯನಿಕ ಬಳಕೆಗಿಂತ ಜೈವಿಕ ತಂತ್ರಕ್ಕೆ ಹೆಚ್ಚು ಒತ್ತು<br />ನೀಡಲಾಗುತ್ತಿದೆ.</p>.<p>'ಅಂಥೋಕೋರಿಡ್ಬಗ್' ಎಂಬ ಪರ ಭಕ್ಷಕಗಳನ್ನು ಸಸ್ಯಕಾಶಿ ಲಾಲ್ ಬಾಗ್ನಿಂದ ಉಚಿತವಾಗಿ ತಂದು ಬಿಡುಗಡೆಗೊಳಿಸುವ ವಿಧಾನದಲ್ಲಿ ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆದಿದೆ. ಈ ಪರಾವಲಂಬಿ ಹುಳುಗಳು ಪರಾವಲಂಬಿ ಹುಳುಗಳನ್ನು ತೆಂಗಿನ ಜತೆಗೆ ಬಾದೆ ನೀಡುವ ಕೀಟದ ಮೊಟ್ಟೆಗಳನ್ನು ತಿಂದು ಹುಳುಗಳ ಸಂತಾನೋತ್ಪತ್ತಿನಿಯಂತ್ರಿಸಲಿವೆ.</p>.<p>ಕಪ್ಪುಹುಳುವಿನ ದೇಹದ ಮೊಟ್ಟೆಗಳ ಮೇಲೆ ಮೊಟ್ಟೆಯಿಟ್ಟು ಜೀವನ ಚಕ್ರ ನಡೆಸಿ ಅದರ ಸಂತತಿ ಕೊಲ್ಲುವ ಗೋನಿಯೋಜಸ್ ನೆಫಾಂಟಿಡಿಸ್ ಕೀಟಗಳನ್ನು ತರಿಸಲಾಗುತ್ತಿದೆ. ಅಧಿಕಾರಿಗಳು ಹಾಗೂ ಕೃಷಿ ತಜ್ಞರು ರೈತರ ಜೊತೆಗೂಡಿ ಹಾನಿಯಾಗಿರುವ ಪ್ರದೇಶಗಳಿಗೆ ಕೀಟಗಳನ್ನು ಬಿಡುತ್ತಿದ್ದಾರೆ. ಹೀಗೆ ಒಟ್ಟಾರೆ 3 ಲಕ್ಷದಷ್ಟು ಕೀಟಗಳನ್ನು ತೋಟಗಳಿಗೆ ಬಿಡಲು ಯೋಜಿಸಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವವನ್ನೂಸಲ್ಲಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>