ಭಾನುವಾರ ಮದುವೆ ನೆರವೇರಿದ್ದು, ಮಂಗಳವಾರ ಬೀಗರಿಗಾಗಿ ಮೋಳೆದೊಡ್ಡಿಯಲ್ಲಿ ಔತಣ ಕೂಟ ನಡೆಯಿತು. ಇಲ್ಲಿ ಊಟ ಮಾಡಿದವರ ಪೈಕಿ 150-200 ಮಂದಿ ರಾತ್ರಿ ವೇಳೆಗೆ ವಾಂತಿ-ಭೇದಿಯಿಂದಾಗಿ ಚನ್ನಪಟ್ಟಣ ತಾಲ್ಲೂಕು ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತು.