ಕೊಂಕಣಿದೊಡ್ಡಿ ನಿವಾಸಿ ರಾಜಣ್ಣ (50) ರಕ್ಷಣೆಗೆ ಒಳಗಾದವರು. ಇವರ ಹೊಲದ ಮಧ್ಯೆ ಬೆಂಗಳೂರು-ಮೈಸೂರು ಹೆದ್ದಾರಿಯ ಬೈಪಾಸ್ ರಸ್ತೆ ಹಾದುಹೋಗಿದೆ. ಆ ರಸ್ತೆ ಮಧ್ಯೆ ಹಳ್ಳದ ನೀರು ಹರಿದು ಹೋಗಲು ಬೃಹತ್ತಾದ ಪೈಪ್ ಗಳನ್ನು ಹಾಕಲಾಗಿದೆ. ಹೊಲದ ಒಂದು ಭಾಗದಲ್ಲಿ ಕೊಳವೆ ಬಾವಿ ಕೊರೆಯಿಸಿದ್ದು, ಅದರ ಪೈಪ್ ಅನ್ನು ರಸ್ತೆ ಒಳಗಿನ ಪೈಪ್ ಲೈನ್ ಮೂಲಕ ಹೊಲದ ಮತ್ತೊಂದು ಬದಿಗೆ ಕೊಂಡೊಯ್ಯಲು ರಾಜಣ್ಣ ಮುಂದಾಗಿದ್ದರು. ಇದಕ್ಕಾಗಿ ರಸ್ತೆಯ ಪೈಪ್ ಲೈನ್ ಒಳಗೆ ತೂರಿ ಮುಂದೆ ಸಾಗಿದ್ದರು. ಈ ಮಧ್ಯೆ ಪೈಪ್ ಒಳಗೆ ಸಿಲುಕಿಕೊಂಡಿದ್ದರು.