ನೀರಿ ಸಲಹೆ ಪಡೆಯಲು ಸಿದ್ಧವಿರುವುದಾಗಿ ಸರ್ಕಾರ ಸಲ್ಲಿಸಿದ ಹೇಳಿಕೆ ದಾಖಲಿಸಿಕೊಂಡ ಪೀಠ, ‘ಅರ್ಜಿದಾರರು ತಜ್ಞರ ಜತೆ ಸಮಾಲೋಚಿಸಿರುವ ವಿವರ ಮತ್ತು ದಾಖಲೆ ಸಲ್ಲಿಸಲಿ. ನೀರಿ ಸಂಸ್ಥೆಯಿಂದಲೂ ವರದಿ ಬರಲಿ, ಬಳಿಕವೇ ನಿರ್ಧರಿಸೋಣ’ ಎಂದು ತಿಳಿಸಿ ವಿಚಾರಣೆಯನ್ನು ಜ.15ಕ್ಕೆ ಮುಂದೂಡಿತು. ಮಧ್ಯಂತರ ತಡೆಯಾಜ್ಞೆಯನ್ನೂ ವಿಸ್ತರಿಸಿತು.