ಕುದೂರು: ತಿಪ್ಪಸಂದ್ರ ಹೋಬಳಿಯ ಮಾಯಸಂದ್ರ ಹಾಗೂ ಯಲ್ಲಾಪುರ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್ 111ರ 20 ಎಕರೆ ಜಮೀನಿನಲ್ಲಿ ಬೆಳೆದಿದ್ದ ಸುಮಾರು 40ರಿಂದ 50 ಶ್ರೀಗಂಧದ ಮರಗಳನ್ನು ಕಡಿದು ಅದರಲ್ಲಿ 10 ಮರಗಳನ್ನು ಕದ್ದೊಯ್ದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಯಲ್ಲಾಪುರ ಗ್ರಾಮದ ಜಯರಾಮೇಗೌಡ ಅವರ ಜಮೀನಿನಲ್ಲಿ ಕಳ್ಳತನ ನಡೆದಿದೆ. ಸುಮಾರು ₹30-40 ಲಕ್ಷಗಳಷ್ಟು ನಷ್ಟವಾಗಿದೆ ಎಂದು ಗುರುಸಿದ್ದಯ್ಯ ಎಂಬುವರು ಕುದೂರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ತಿಪ್ಪಸಂದ್ರ ಹೋಬಳಿಯ ಮಾಯಸಂದ್ರ ಗ್ರಾಮದ ಜಮೀನೊಂದರಲ್ಲಿ ಶ್ರೀಗಂಧದ ಮರಗಳನ್ನು ಕಳ್ಳರು ಕಡಿದಿರುವುದು.
ತಿಪ್ಪಸಂದ್ರ ಹೋಬಳಿಯ ಮಾಯಸಂದ್ರ ಗ್ರಾಮದ ಜಮೀನೊಂದರಲ್ಲಿ ಶ್ರೀಗಂಧದ ಮರಗಳನ್ನು ಕಳ್ಳರು ಕಡಿದಿರುವುದು.