ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆಯಿಂದ ಆತ್ಮ ತೃಪ್ತಿ ಲಭ್ಯ: ಹೊನ್ನೇಗೌಡ

ರೋಟರಿ ಸಿಲ್ಕ್ ಸಿಟಿ ಪದಾಧಿಕಾರಿಗಳ ಪದಗ್ರಹಣ
Last Updated 11 ಜುಲೈ 2021, 4:07 IST
ಅಕ್ಷರ ಗಾತ್ರ

ರಾಮನಗರ: ಸೇವೆ ಎನ್ನುವುದು ಆತ್ಮ ಸಂತೋಷ ಮತ್ತು ಆತ್ಮ ತೃಪ್ತಿ ನೀಡುತ್ತದೆ. ಅದನ್ನು ಜೀವನದ ಅವಿಭಾಜ್ಯ ಅಂಗ ಎಂದು ಭಾವಿಸಿಕೊಂಡಿರುವ ಜನರು ಸದಾ ಸಂತೋಷದಿಂದ ಇರುತ್ತಾರೆ ಎಂದು ರೋಟರಿ ಸಂಸ್ಥೆಯ ಜಿಲ್ಲಾ ವಲಯ ಪಾಲಕ ಹೊನ್ನೇಗೌಡ ತಿಳಿಸಿದರು.

ನಗರದ ಎಬಿಆರ್ ರೆಸ್ಟೋರೆಂಟ್ ಸಭಾಂಗಣದಲ್ಲಿ ರೋಟರಿ ಸಿಲ್ಕ್ ಸಿಟಿ ಸಂಸ್ಥೆಯ 2021-2022ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಸೇವಾ ಮನೋ ಭಾವ ರೂಢಿಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ರೋಟರಿ ಸಿಲ್ಕ್ ಸಿಟಿ ನೂತನ ಅಧ್ಯಕ್ಷ ಸೋಮಶೇಖರ್ ರಾವ್ ಕಾಂಬ್ಳೆ ಮಾತನಾಡಿ, ಸಂಸ್ಥೆಯು ಈಗಾಗಲೇ ಸಮಾಜಮುಖಿ ಸಂಸ್ಥೆಗಳ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ. ಮುಂದಿನ ದಿನಗಳಲ್ಲಿ ಈ ಕೆಲಸಗಳ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ರೋಟರಿ ಸಂಸ್ಥೆಯ ಜಿಲ್ಲಾ ಸಹ ಪಾಲಕ ಬಿ.ಆರ್. ಆನಂದ್, ರೋಟರಿ ಸಿಲ್ಕ್ ಸಿಟಿ ನೂತನ ಕಾರ್ಯದರ್ಶಿ ಚಂದ್ರಪ್ಪ, ನಿರ್ಗಮಿತ ಅಧ್ಯಕ್ಷ ಎನ್. ರವಿಕುಮಾರ್, ಬಿ. ಗೋಪಾಲ್, ಎಲ್. ಪ್ರಭಾಕರ್, ಎ.ಜೆ. ಸುರೇಶ್, ಪದಾಧಿಕಾರಿಗಳಾದ ದೀಪಕ್, ರಾಘವೇಂದ್ರ, ಪರಮೇಶ್, ನರಸಿಂಹರಾಜು, ಆರ್.ಪಿ. ಪ್ರದೀಪ್, ಆರ್. ಶಿವರಾಜ್, ಧನರಾಜ್, ಪ್ರಕಾಶ್, ಲತಾ ಗೋಪಾಲ್, ಸತೀಶ್, ನವೀನ್‍ಕುಮಾರ್, ಮಂಜುನಾಥ್, ನೂತನ ಸದಸ್ಯರಾದ ಸಿ. ಪುರುಷೋತ್ತಮ್, ಗುರುರಾಜ್, ರಾಘವೇಂದ್ರ, ಲೋಕೇಶ್, ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT