ಅನುಕರಣೆಯ ಕಾವ್ಯಕ್ಕೆ ಆಯಸ್ಸು ಕಮ್ಮಿ. ಅದು ಮೇರು ಕವಿಗಳದ್ದೇ ಆಗಿದ್ದರೂ ಕೆಲವೇ ಕವಿತೆಗಳಿಗೆ ಸೀಮಿತವಾಗಿ ಬರವಣಿಗೆಯೇ ನಿಂತು ಹೋಗುತ್ತದೆ. ತನ್ನೊಳಗೆ ಅಂತರ್ಗತವಾಗಿರುವ ಶೈಲಿಯಲ್ಲಿ ಬರೆಯಬಲ್ಲವನು ಮಾತ್ರ ಕಾವ್ಯ ಜಗತ್ತಿನಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ
– ಎಸ್.ಜಿ. ಸಿದ್ದರಾಮಯ್ಯ ವಿಮರ್ಶಕ
ನಾನು ಹೆಚ್ಚು ಓದಿಕೊಂಡವನಲ್ಲ. ಯಾವುದೋ ಘಳಿಗೆಯಲ್ಲಿ ಉಂಟಾಗುವ ನನ್ನೊಳಗಿನ ತುಮುಲಗಳಿಗೆ ಪದಗಳ ಮಾಲೆ ಕಟ್ಟುತ್ತೇನೆ. ಅದು ಕಾವ್ಯವೆಂದು ಪರಿಗಣಿತವಾಗಿ ಈ ಬಗೆಯ ವಿಶ್ಲೇಷಣೆ ಮೆಚ್ಚುಗೆಗೆ ಒಳಗಾಗುತ್ತದೆ ಎಂಬ ಯಾವ ಕಲ್ಪನೆಯೂ ಇರುವುದಿಲ್ಲ