<p><strong>ಚನ್ನಪಟ್ಟಣ: </strong>ಭೀಮನ ಅಮಾವಾಸ್ಯೆ ಪ್ರಯಕ್ತ ಭಾನುವಾರ ತಾಲ್ಲೂಕಿನ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.</p>.<p>ಬೆಳಿಗ್ಗೆಯಿಂದಲೇ ನಡೆದ ಪೂಜೆಯಲ್ಲಿ ಭಕ್ತರು, ವಿಶೇಷವಾಗಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಂಡಿದ್ದು ಕಂಡುಬಂತು. ದೇವಾಲಯಗಳಲ್ಲಿ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪೂಜೆ, ಹೋಮ, ಹವನ ನಡೆದವು. ಕೆಲವು ದೇವಾಲಯಗಳಲ್ಲಿ ಅನ್ನದಾನ, ಪ್ರಸಾದ ವಿತರಣೆ ಮಾಡಲಾಯಿತು.</p>.<p>ತಾಲ್ಲೂಕಿನ ಕೆಂಗಲ್ ಆಂಜನೇಯಸ್ವಾಮಿ, ಮಳೂರು ಅಪ್ರಮೇಯಸ್ವಾಮಿ, ಅರ್ಕೇಶ್ವರಸ್ವಾಮಿ, ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ, ಬೇವೂರು ತಿಮ್ಮಪ್ಪಸ್ವಾಮಿ, ಕರಿಯಪ್ಪನದೊಡ್ಡಿ ವೆಂಕಟೇಶ್ವರಸ್ವಾಮಿ, ನೀಲಕಂಠನಹಳ್ಳಿ ತಿರುಮಲಸ್ವಾಮಿ, ಹುಣಸನಹಳ್ಳಿ ಬಿಸಲಮ್ಮ ದೇವಿ, ಕೋಡಂಬಹಳ್ಳಿ ಮರಳೇಶ್ವರಸ್ವಾಮಿ, ಕೂಡ್ಲೂರು ಶಿವ ದೇವಾಲಯ, ಹೊಂಗನೂರು ಶಿವ ದೇವಾಲಯ, ಹುಚ್ಚಯ್ಯನದೊಡ್ಡಿ ಮಹದೇಶ್ವರಸ್ವಾಮಿ, ಪಟ್ಟಣದ ಮಹದೇಶ್ವರಸ್ವಾಮಿ, ವರದರಾಜಸ್ವಾಮಿ, ಕೋಟೆ ಆಂಜನೇಯಸ್ವಾಮಿ, ಎಲೇಕೇರಿ ಆಂಜನೇಯಸ್ವಾಮಿ, ಕೊಲ್ಲಾಪುರದಮ್ಮ ದೇವಸ್ಥಾನ ಸೇರಿದಂತೆ ಎಲ್ಲೆಡೆ ನಡೆದ ಪೂಜೆಯಲ್ಲಿ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡು ಪೂಜೆ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ: </strong>ಭೀಮನ ಅಮಾವಾಸ್ಯೆ ಪ್ರಯಕ್ತ ಭಾನುವಾರ ತಾಲ್ಲೂಕಿನ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.</p>.<p>ಬೆಳಿಗ್ಗೆಯಿಂದಲೇ ನಡೆದ ಪೂಜೆಯಲ್ಲಿ ಭಕ್ತರು, ವಿಶೇಷವಾಗಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಂಡಿದ್ದು ಕಂಡುಬಂತು. ದೇವಾಲಯಗಳಲ್ಲಿ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪೂಜೆ, ಹೋಮ, ಹವನ ನಡೆದವು. ಕೆಲವು ದೇವಾಲಯಗಳಲ್ಲಿ ಅನ್ನದಾನ, ಪ್ರಸಾದ ವಿತರಣೆ ಮಾಡಲಾಯಿತು.</p>.<p>ತಾಲ್ಲೂಕಿನ ಕೆಂಗಲ್ ಆಂಜನೇಯಸ್ವಾಮಿ, ಮಳೂರು ಅಪ್ರಮೇಯಸ್ವಾಮಿ, ಅರ್ಕೇಶ್ವರಸ್ವಾಮಿ, ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ, ಬೇವೂರು ತಿಮ್ಮಪ್ಪಸ್ವಾಮಿ, ಕರಿಯಪ್ಪನದೊಡ್ಡಿ ವೆಂಕಟೇಶ್ವರಸ್ವಾಮಿ, ನೀಲಕಂಠನಹಳ್ಳಿ ತಿರುಮಲಸ್ವಾಮಿ, ಹುಣಸನಹಳ್ಳಿ ಬಿಸಲಮ್ಮ ದೇವಿ, ಕೋಡಂಬಹಳ್ಳಿ ಮರಳೇಶ್ವರಸ್ವಾಮಿ, ಕೂಡ್ಲೂರು ಶಿವ ದೇವಾಲಯ, ಹೊಂಗನೂರು ಶಿವ ದೇವಾಲಯ, ಹುಚ್ಚಯ್ಯನದೊಡ್ಡಿ ಮಹದೇಶ್ವರಸ್ವಾಮಿ, ಪಟ್ಟಣದ ಮಹದೇಶ್ವರಸ್ವಾಮಿ, ವರದರಾಜಸ್ವಾಮಿ, ಕೋಟೆ ಆಂಜನೇಯಸ್ವಾಮಿ, ಎಲೇಕೇರಿ ಆಂಜನೇಯಸ್ವಾಮಿ, ಕೊಲ್ಲಾಪುರದಮ್ಮ ದೇವಸ್ಥಾನ ಸೇರಿದಂತೆ ಎಲ್ಲೆಡೆ ನಡೆದ ಪೂಜೆಯಲ್ಲಿ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡು ಪೂಜೆ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>