<p><strong>ಕನಕಪುರ</strong>: ನಗರದ ಬೀದಿ ದೀಪಗಳು ಉರಿಯದೆ ಜನರು ಕತ್ತಲೆಯಲ್ಲಿ ಜೀವನ ದೂಡುವಂತಾಗಿದೆ. ಇಲ್ಲಿನ ಎಂ.ಜಿ ರಸ್ತೆ ನಾರಾಯಣಪ್ಪನ ಕೆರೆಯಿಂದ ರೈಸ್ಮಿಲ್ವರೆಗೂ ಇರುವ ಜೋಡಿ ರಸ್ತೆ ವಿಭಜಕಕ್ಕೆ ಅಳವಡಿಸಿರುವ ಜೋಡಿ ದೀಪಗಳು ಹಲವು ತಿಂಗಳಿಂದ ರಾತ್ರಿ ವೇಳೆ ಉರಿಯುತ್ತಿಲ್ಲ. </p>.<p>ಕನಕಪುರ ನಗರದ ಎಂ.ಜಿ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಅಂದಿನ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕ್ಷೇತ್ರದ ಮತದಾರರು ಹಾಗೂ ನಗರದ ಅಂದ ಹೆಚ್ಚಿಸಲು ಜೋಡಿ ರಸ್ತೆ ನಿರ್ಮಿಸಿ ಮಧ್ಯದಲ್ಲಿ ಜೋಡಿ ದೀಪಗಳನ್ನು ಹಾಕಿಸಿದ್ದರು.</p>.<p>ಈಚೆಗೆ ವೈಟ್ ಟಾಪಿಂಗ್ ಮಾಡಲು ಕಾಂಕ್ರೀಟ್ ಕಾಮಗಾರಿ ಆರಂಭಿಸಿದ ನಂತರ ಬೀದಿ ದೀಪಗಳು ಉರಿಯುತ್ತಿಲ್ಲ. ಕಾರಣ ಕೇಳಿದರೆ ಕಾಮಗಾರಿ ವೇಳೆ ಕೇಬಲ್ ಹಾಳಾಗಿದೆ ಎನ್ನುವ ಉತ್ತರವನ್ನು ನಗರಸಭೆ ನೀಡುತ್ತಾ ಬಂದಿದೆ.</p>.<p>ನಗರದ ಮೂರು ಕಿಲೋಮೀಟರ್ ಉದ್ದದ ರಸ್ತೆಯಲ್ಲಿ ಒಂದು ದೀಪ ಉರಿಯದ ಕಾರಣ ಇಡೀ ನಗರ ಕತ್ತಲೆಯಲ್ಲಿ ಮುಳುಗಿದೆ. ರಾತ್ರಿ 6ರಿಂದ ಬೆಳಿಗ್ಗೆ 6ರವರೆಗೆ ಜನರು ಕತ್ತಲೆಯಲ್ಲಿ ಓಡಾಡುವಂತಾಗಿದೆ. ಜನರ ಪಾಲಿಗೆ ಕತ್ತಲೆ ಭಾಗ್ಯ ಸಿಕ್ಕಿದೆ.</p>.<p>ಕುರುಪೇಟೆ, ಹೌಸಿಂಗ್ ಬೋರ್ಡ್, ರೈಸ್ಮಿಲ್ ಕಡೆಯಿಂದ ಬಸ್ ನಿಲ್ದಾಣಕ್ಕೆ ಬರುವ ಮತ್ತು ಹೋಗುವ ಜನರು ಕತ್ತಲೆಯಲ್ಲಿ ನಡೆದುಕೊಂಡು ಹೋಗಬೇಕಿದೆ. ಕತ್ತಲೆ ಕಾರಣದಿಂದ ಅಪಘಾತಗಳು ಸಾಮಾನ್ಯವಾಗಿವೆ. ಕತ್ತಲೆ ಲಾಭ ಪಡೆದು ಕಳವು ಪ್ರಕರಣಗಳು ಕೂಡ ಹೆಚ್ಚುತ್ತಿವೆ.</p>.<p>ನಗರಸಭೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಬೀದಿದೀಪ ಸರಿಪಡಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಆದರೂ, ನಗರಸಭೆ ಇಲ್ಲಿವರೆಗೂ ನಗರದ ಜೋಡಿ ರಸ್ತೆಯಲ್ಲಿ ಕೆಟ್ಟು ನಿಂತಿರುವ ಬೀದಿದೀಪ ಸರಿಪಡಿಸುವ ಗೋಜಿಗೆ ಹೋಗಿಲ್ಲ ಎನ್ನುತ್ತಾರೆ ಸ್ಥಳೀಯರು. </p>.<p>ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕನಕಪುರ ನಗರವನ್ನು ರಾಜ್ಯದಲ್ಲೇ ಮಾದರಿ ನಗರವನ್ನಾಗಿ ಮಾಡಿದ್ದಾರೆ. ಮಾದರಿ ನಗರದಲ್ಲಿ ಜನರು ಬೆಳಕಿಲ್ಲದೆ ಕತ್ತಲೆಯಲ್ಲಿ ಪರದಾಡುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳಿಗೆ ಸೂಚನೆ ನೀಡಿ ಬೀದಿದೀಪ ಸರಿಪಡಿಸಬೇಕು ಎನ್ನುವುದು ನಾಗರಿಕರ ಒತ್ತಾಯ.</p>.<div><blockquote>ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಸಮಸ್ಯೆಯಾಗಿದೆ. ಸರಿಪಡಿಸುವಂತೆ ಸೂಚಿಸಿದರೂ ಕ್ರಮಕೈಗೊಂಡಿಲ್ಲ. ನಗರಸಭೆಯಿಂದಲೇ ಸರಿಪಡಿಸಲಾಗುವುದು</blockquote><span class="attribution"> ಸಾಗರ್ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್</span></div>.<div><blockquote>ನಗರಸಭೆ ಅವರು ಈಗಲೂ ಸಮಸ್ಯೆ ಜಾಗ ತೋರಿಸಿದರೆ ತಕ್ಷಣವೇ ಕೇಬಲ್ ಸರಿಪಡಿಸಿ ಕೊಡಲಾಗುವುದು</blockquote><span class="attribution">ಪ್ರಕಾಶ್ ಸಹಾಯಕ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ</span></div>.<div><blockquote>ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು. ಸಾರ್ವಜನಿಕವಾಗಿ ಆಗಿರುವ ಸಮಸ್ಯೆ ಪರಿಹರಿಸಬೇಕು.</blockquote><span class="attribution">ಮಹಾಲಿಂಗ ಹೌಸಿಂಗ್ ಬೋರ್ಡ್ ನಿವಾಸಿ</span></div>.<div><blockquote>ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಗರಸಭೆ ಶೀಘ್ರವಾಗಿ ಬೀದಿ ದೀಪಗಳನ್ನು ಸರಿಪಡಿಸಬೇಕು.</blockquote><span class="attribution">ಅಂದಾನಿ ಗೌಡ ಮಹದೇಶ್ವರ ಬಡಾವಣೆ ನಿವಾಸಿ</span></div>.<div><blockquote>ಎಂ.ಜಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಮಾಡುವಾಗ ಬೀದಿ ದೀಪ ಹಾಳಾಗಿದೆ. ಆರು ತಿಂಗಳಾದರೂ ಅದನ್ನು ರಿಪೇರಿ ಮಾಡಿಸಿಲ್ಲ </blockquote><span class="attribution">ಕುಮಾರ್ ಬೃಂದಾವನ ನಗರ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ನಗರದ ಬೀದಿ ದೀಪಗಳು ಉರಿಯದೆ ಜನರು ಕತ್ತಲೆಯಲ್ಲಿ ಜೀವನ ದೂಡುವಂತಾಗಿದೆ. ಇಲ್ಲಿನ ಎಂ.ಜಿ ರಸ್ತೆ ನಾರಾಯಣಪ್ಪನ ಕೆರೆಯಿಂದ ರೈಸ್ಮಿಲ್ವರೆಗೂ ಇರುವ ಜೋಡಿ ರಸ್ತೆ ವಿಭಜಕಕ್ಕೆ ಅಳವಡಿಸಿರುವ ಜೋಡಿ ದೀಪಗಳು ಹಲವು ತಿಂಗಳಿಂದ ರಾತ್ರಿ ವೇಳೆ ಉರಿಯುತ್ತಿಲ್ಲ. </p>.<p>ಕನಕಪುರ ನಗರದ ಎಂ.ಜಿ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಅಂದಿನ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕ್ಷೇತ್ರದ ಮತದಾರರು ಹಾಗೂ ನಗರದ ಅಂದ ಹೆಚ್ಚಿಸಲು ಜೋಡಿ ರಸ್ತೆ ನಿರ್ಮಿಸಿ ಮಧ್ಯದಲ್ಲಿ ಜೋಡಿ ದೀಪಗಳನ್ನು ಹಾಕಿಸಿದ್ದರು.</p>.<p>ಈಚೆಗೆ ವೈಟ್ ಟಾಪಿಂಗ್ ಮಾಡಲು ಕಾಂಕ್ರೀಟ್ ಕಾಮಗಾರಿ ಆರಂಭಿಸಿದ ನಂತರ ಬೀದಿ ದೀಪಗಳು ಉರಿಯುತ್ತಿಲ್ಲ. ಕಾರಣ ಕೇಳಿದರೆ ಕಾಮಗಾರಿ ವೇಳೆ ಕೇಬಲ್ ಹಾಳಾಗಿದೆ ಎನ್ನುವ ಉತ್ತರವನ್ನು ನಗರಸಭೆ ನೀಡುತ್ತಾ ಬಂದಿದೆ.</p>.<p>ನಗರದ ಮೂರು ಕಿಲೋಮೀಟರ್ ಉದ್ದದ ರಸ್ತೆಯಲ್ಲಿ ಒಂದು ದೀಪ ಉರಿಯದ ಕಾರಣ ಇಡೀ ನಗರ ಕತ್ತಲೆಯಲ್ಲಿ ಮುಳುಗಿದೆ. ರಾತ್ರಿ 6ರಿಂದ ಬೆಳಿಗ್ಗೆ 6ರವರೆಗೆ ಜನರು ಕತ್ತಲೆಯಲ್ಲಿ ಓಡಾಡುವಂತಾಗಿದೆ. ಜನರ ಪಾಲಿಗೆ ಕತ್ತಲೆ ಭಾಗ್ಯ ಸಿಕ್ಕಿದೆ.</p>.<p>ಕುರುಪೇಟೆ, ಹೌಸಿಂಗ್ ಬೋರ್ಡ್, ರೈಸ್ಮಿಲ್ ಕಡೆಯಿಂದ ಬಸ್ ನಿಲ್ದಾಣಕ್ಕೆ ಬರುವ ಮತ್ತು ಹೋಗುವ ಜನರು ಕತ್ತಲೆಯಲ್ಲಿ ನಡೆದುಕೊಂಡು ಹೋಗಬೇಕಿದೆ. ಕತ್ತಲೆ ಕಾರಣದಿಂದ ಅಪಘಾತಗಳು ಸಾಮಾನ್ಯವಾಗಿವೆ. ಕತ್ತಲೆ ಲಾಭ ಪಡೆದು ಕಳವು ಪ್ರಕರಣಗಳು ಕೂಡ ಹೆಚ್ಚುತ್ತಿವೆ.</p>.<p>ನಗರಸಭೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಬೀದಿದೀಪ ಸರಿಪಡಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಆದರೂ, ನಗರಸಭೆ ಇಲ್ಲಿವರೆಗೂ ನಗರದ ಜೋಡಿ ರಸ್ತೆಯಲ್ಲಿ ಕೆಟ್ಟು ನಿಂತಿರುವ ಬೀದಿದೀಪ ಸರಿಪಡಿಸುವ ಗೋಜಿಗೆ ಹೋಗಿಲ್ಲ ಎನ್ನುತ್ತಾರೆ ಸ್ಥಳೀಯರು. </p>.<p>ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕನಕಪುರ ನಗರವನ್ನು ರಾಜ್ಯದಲ್ಲೇ ಮಾದರಿ ನಗರವನ್ನಾಗಿ ಮಾಡಿದ್ದಾರೆ. ಮಾದರಿ ನಗರದಲ್ಲಿ ಜನರು ಬೆಳಕಿಲ್ಲದೆ ಕತ್ತಲೆಯಲ್ಲಿ ಪರದಾಡುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳಿಗೆ ಸೂಚನೆ ನೀಡಿ ಬೀದಿದೀಪ ಸರಿಪಡಿಸಬೇಕು ಎನ್ನುವುದು ನಾಗರಿಕರ ಒತ್ತಾಯ.</p>.<div><blockquote>ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಸಮಸ್ಯೆಯಾಗಿದೆ. ಸರಿಪಡಿಸುವಂತೆ ಸೂಚಿಸಿದರೂ ಕ್ರಮಕೈಗೊಂಡಿಲ್ಲ. ನಗರಸಭೆಯಿಂದಲೇ ಸರಿಪಡಿಸಲಾಗುವುದು</blockquote><span class="attribution"> ಸಾಗರ್ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್</span></div>.<div><blockquote>ನಗರಸಭೆ ಅವರು ಈಗಲೂ ಸಮಸ್ಯೆ ಜಾಗ ತೋರಿಸಿದರೆ ತಕ್ಷಣವೇ ಕೇಬಲ್ ಸರಿಪಡಿಸಿ ಕೊಡಲಾಗುವುದು</blockquote><span class="attribution">ಪ್ರಕಾಶ್ ಸಹಾಯಕ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ</span></div>.<div><blockquote>ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು. ಸಾರ್ವಜನಿಕವಾಗಿ ಆಗಿರುವ ಸಮಸ್ಯೆ ಪರಿಹರಿಸಬೇಕು.</blockquote><span class="attribution">ಮಹಾಲಿಂಗ ಹೌಸಿಂಗ್ ಬೋರ್ಡ್ ನಿವಾಸಿ</span></div>.<div><blockquote>ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಗರಸಭೆ ಶೀಘ್ರವಾಗಿ ಬೀದಿ ದೀಪಗಳನ್ನು ಸರಿಪಡಿಸಬೇಕು.</blockquote><span class="attribution">ಅಂದಾನಿ ಗೌಡ ಮಹದೇಶ್ವರ ಬಡಾವಣೆ ನಿವಾಸಿ</span></div>.<div><blockquote>ಎಂ.ಜಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಮಾಡುವಾಗ ಬೀದಿ ದೀಪ ಹಾಳಾಗಿದೆ. ಆರು ತಿಂಗಳಾದರೂ ಅದನ್ನು ರಿಪೇರಿ ಮಾಡಿಸಿಲ್ಲ </blockquote><span class="attribution">ಕುಮಾರ್ ಬೃಂದಾವನ ನಗರ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>