<p><strong>ಮಾಗಡಿ:</strong> ತಾಲ್ಲೂಕಿನ ಚಕ್ರಬಾವಿಯ ಕೋಡಿ ಬಸವಣ್ಣ ಹಾಗೂ ಬೆಟ್ಟದ ಸಿದ್ದಪ್ಪ ಸ್ವಾಮಿಗೆ ಭಾನುವಾರ ಪೂಜೆ ಮಾಡಲಾಯಿತು.</p>.<p>ಪ್ರತಿ ವರ್ಷದಂತೆ ಉತ್ತಮ ಮಳೆ, ಬೆಳೆಗಾಗಿ ಗ್ರಾಮಸ್ಥರು ಹರಕೆ ಕಟ್ಟಿ ಬೆಟ್ಟದ ಸಿದ್ದಪ್ಪ ಸ್ವಾಮಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸುತ್ತಾರೆ. ಕೊಡಿ ಬಸವಣ್ಣ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಗ್ರಾಮಸ್ಥರು ಸಾಮೂಹಿಕ ಭೋಜನ ಮಾಡುತ್ತಾರೆ.</p>.<p>ಪ್ರತಿ ವರ್ಷವೂ ಬೆಟ್ಟದ ಸಿದ್ದಪ್ಪನಿಗೆ ಪೂಜೆ ಸಲ್ಲಿಸಿ ದೀಪ ಹಚ್ಚಿ ಬರುವುದರಿಂದ ಗ್ರಾಮಕ್ಕೆ ಒಳಿತಾಗುತ್ತಿದೆ ಎಂದು ಗ್ರಾಮದ ಸೀಮೆಎಣ್ಣೆ ರಾಜಣ್ಣ ಹೇಳಿದರು.</p>.<p>ಚಕ್ರಬಾವಿ ಗ್ರಾಮಸ್ಥರು ಸಾಮೂಹಿಕ ಭೋಜನಕ್ಕಾಗಿ ಗ್ರಾಮದ ಎಲ್ಲಾ ಮನೆಯಿಂದ ಅಕ್ಕಿ,ಬೆಳೆ, ತರಕಾರಿ ಹಾಗೂ ವಿವಿಧ ಧಾನ್ಯಗಳನ್ನು ಸಂಗ್ರಹಿಸಿ ತರುತ್ತಾರೆ. ಗ್ರಾಮಸ್ಥರೇ ಸೇರಿ ಪ್ರಸಾದ ತಯಾರಿಸಿ ಪ್ರತಿಯೊಬ್ಬರಿಗೂ ಬಡಿಸುತ್ತಾರೆ. ಗ್ರಾಮಕ್ಕೆ ಬಂದ ಬೆಂಗಳೂರು ಜಿಕೆವಿಕೆ ತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<p>ಬಸವರಾಜು ಪುಟಾಣಿ ಕುಮಾರ್, ಪಂಚಾಕ್ಷರಿ, ಈರಯ್ಯ, ರವೀಂದ್ರ, ಅಂಗಡಿ ಕುಮಾರ್, ಬೈರೇಶ್, ಶ್ರೀಧರ್, ಜಗದೀಶ್, ಅಂಗಡಿ ಸೂರಿ, ಶೈಲೇಶ್, ನಾಗರಾಜು, ದೀಪಕ್, ಮಹೇಶ್, ಕಿರಣ್, ವಾಟರ್ ಮ್ಯಾನ್ ರಾಜಣ್ಣ, ದೇವರಾಜು, ಸುರೇಶ್, ಮನು, ಬಸವರಾಜು, ಬೆಳಗುಂಬ ವಿಶ್ವನಾಥ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ:</strong> ತಾಲ್ಲೂಕಿನ ಚಕ್ರಬಾವಿಯ ಕೋಡಿ ಬಸವಣ್ಣ ಹಾಗೂ ಬೆಟ್ಟದ ಸಿದ್ದಪ್ಪ ಸ್ವಾಮಿಗೆ ಭಾನುವಾರ ಪೂಜೆ ಮಾಡಲಾಯಿತು.</p>.<p>ಪ್ರತಿ ವರ್ಷದಂತೆ ಉತ್ತಮ ಮಳೆ, ಬೆಳೆಗಾಗಿ ಗ್ರಾಮಸ್ಥರು ಹರಕೆ ಕಟ್ಟಿ ಬೆಟ್ಟದ ಸಿದ್ದಪ್ಪ ಸ್ವಾಮಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸುತ್ತಾರೆ. ಕೊಡಿ ಬಸವಣ್ಣ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಗ್ರಾಮಸ್ಥರು ಸಾಮೂಹಿಕ ಭೋಜನ ಮಾಡುತ್ತಾರೆ.</p>.<p>ಪ್ರತಿ ವರ್ಷವೂ ಬೆಟ್ಟದ ಸಿದ್ದಪ್ಪನಿಗೆ ಪೂಜೆ ಸಲ್ಲಿಸಿ ದೀಪ ಹಚ್ಚಿ ಬರುವುದರಿಂದ ಗ್ರಾಮಕ್ಕೆ ಒಳಿತಾಗುತ್ತಿದೆ ಎಂದು ಗ್ರಾಮದ ಸೀಮೆಎಣ್ಣೆ ರಾಜಣ್ಣ ಹೇಳಿದರು.</p>.<p>ಚಕ್ರಬಾವಿ ಗ್ರಾಮಸ್ಥರು ಸಾಮೂಹಿಕ ಭೋಜನಕ್ಕಾಗಿ ಗ್ರಾಮದ ಎಲ್ಲಾ ಮನೆಯಿಂದ ಅಕ್ಕಿ,ಬೆಳೆ, ತರಕಾರಿ ಹಾಗೂ ವಿವಿಧ ಧಾನ್ಯಗಳನ್ನು ಸಂಗ್ರಹಿಸಿ ತರುತ್ತಾರೆ. ಗ್ರಾಮಸ್ಥರೇ ಸೇರಿ ಪ್ರಸಾದ ತಯಾರಿಸಿ ಪ್ರತಿಯೊಬ್ಬರಿಗೂ ಬಡಿಸುತ್ತಾರೆ. ಗ್ರಾಮಕ್ಕೆ ಬಂದ ಬೆಂಗಳೂರು ಜಿಕೆವಿಕೆ ತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<p>ಬಸವರಾಜು ಪುಟಾಣಿ ಕುಮಾರ್, ಪಂಚಾಕ್ಷರಿ, ಈರಯ್ಯ, ರವೀಂದ್ರ, ಅಂಗಡಿ ಕುಮಾರ್, ಬೈರೇಶ್, ಶ್ರೀಧರ್, ಜಗದೀಶ್, ಅಂಗಡಿ ಸೂರಿ, ಶೈಲೇಶ್, ನಾಗರಾಜು, ದೀಪಕ್, ಮಹೇಶ್, ಕಿರಣ್, ವಾಟರ್ ಮ್ಯಾನ್ ರಾಜಣ್ಣ, ದೇವರಾಜು, ಸುರೇಶ್, ಮನು, ಬಸವರಾಜು, ಬೆಳಗುಂಬ ವಿಶ್ವನಾಥ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>