ಬೆಂಗಳೂರಿನ ನೈಸ್ ರಸ್ತೆಯಿಂದ ಮಾಗಡಿ ಪಟ್ಟಣದ ವರಗೆ ಚತುಷ್ಪಥ ಮತ್ತು ಮಾಗಡಿಯಿಂದ ಸೋಮುವಾರ ಪೇಟೆವರೆಗೆ, ಪಟ್ಟಣದ ಅಂಬೇಡ್ಕರ್ ಸರ್ಕಲ್ ನಿಂದ ತಾಳೆಕೆರೆ ಹ್ಯಾಂಡ್ ಪೋಸ್ಟ್ವರೆಗೆ ದ್ವಿಪಥ ರಸ್ತೆ ನಿರ್ಮಾಣವಾಗುತ್ತಿದೆ. ರಸ್ತೆಬದಿ ಬಿಸಿಲು ನೆಲಕ್ಕೆ ಬೀಳದಂತೆ ಬೃಹದಾಕಾರವಾಗಿ ಬೆಳೆದಿದ್ದ ಆಲ, ಅರಳಿ, ನೇರಳೆ, ಮಾವು, ಹಿಪ್ಪೆ, ಹೊಂಗೆ, ಬೇವು, ಗೋಣಿಮರ, ಬೂರುಗದ ಮರಗಳನ್ನು ಕತ್ತರಿಸಲಾಗುತ್ತಿದೆ.ನಿರಂತರವಾಗಿ ಮರಗಳ ಮಾರಣಹೋಮ ನಡೆದಿದೆ.