‘ವ್ಯಕ್ತಿಯೊಬ್ಬ ಕರಡಿಯೊಡನೆ ಹೋರಾಡಿ ಮಡಿದಿರುವ ವೀರಗಲ್ಲು ಇತ್ತೀಚಿನ ಕಾಲಮಾನಕ್ಕೆ ಸೇರಿದೆ. ಮೂರು ವೀರಗಲ್ಲುಗಳು ಕಳಚೂರ್ಯರ ಕಾಲದ ಆಡಳಿತ ಮತ್ತು ಜನಜೀವನದ ಬಗ್ಗೆ ಮಾಹಿತಿ ನೀಡಲಿದೆ. ವೀರಗಲ್ಲುಗಳನ್ನು ರಕ್ಷಿಸಲು ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಮುಂದಾಗಬೇಕು. ಇತಿಹಾಸ ಸಂಶೋಧಕರು ಭೇಟಿ ನೀಡಿ ಸಂಶೋಧನೆ ನಡೆಸಿ, ಕೆಂಪೇಗೌಡರ ಮಾಗಡಿ ಸೀಮೆ ಮತ್ತು ಕಳಚೂರ್ಯರ ಆಳ್ವಿಕೆಯ ಕಾಲದಲ್ಲಿ ಇದ್ದ ಸಂಬಂಧಗಳ ಬಗ್ಗೆ ಸಂಶೋಧನೆಯ ಮೂಲಕ ಬೆಳಕು ಚೆಲ್ಲಬೇಕಿದೆ’ ಎಂದರು.