ಇದಲ್ಲದೆ, ಬಿಡದಿಯ ಹಳೆ ಆವರಗೆರೆ ರಸ್ತೆಯಲ್ಲಿ ಆಂಧ್ರದಿಂದ ಬಂದ ಸೋಂಕಿತನೋರ್ವ ವಾಸವಿದ್ದು, ಇದೀಗ ಆತ ತಮ್ಮ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಈತನ ಜತೆ ಇದ್ದ ಮತ್ತೊಬ್ಬ ಯುವಕನನ್ನು ಸದ್ಯ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಮಾಗಡಿಯ ತಿರುಮಲೆ ಬಡಾವಣೆಯಲ್ಲಿನ ವ್ಯಕ್ತಿಯೊಬ್ಬರಿಗೂ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಅಧಿಕಾರಿಗಳು ಇದನ್ನು ಧೃಡಪಡಿಸಿಲ್ಲ.