ವಾಲ್ಮೀಕಿ ಜಯಂತಿ ಹಾಗೂ ಕವಿ ಗೋಷ್ಠಿಯನ್ನು ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ವಿ. ಬಾಲಕೃಷ್ಣ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಭಾರತ ವಿಕಾಸ ಪರಿಷದ್ನ ವಾಲ್ಮೀಕಿ ಶಾಖೆಗೆ ಸೇರ್ಪಡೆಗೊಂಡ ಲೇಖಕ ಎಸ್. ರುದ್ರೇಶ್ವರ ಅವರನ್ನು ಗೌರವಿಸಲಾಯಿತು. ಯೋಗೇಶ್ ಚಕ್ಕೆರೆ, ಕಿರಣ್ ರಾಜ್ ತುಂಬೇನಹಳ್ಳಿ, ಚೇತನ್ ಗುನ್ನೂರು, ಪಿ.ಎನ್. ಅನಂತನಾಗ್ ಕವಿತೆ ವಾಚಿಸಿದರು. ಭಾರತ್ ವಿಕಾಸ ಪರಿಷದ್ ಸಂಚಾಲಕ ಕೆ.ಎಲ್. ಶೇಷಗಿರಿರಾವ್, ಕಾರ್ಯದರ್ಶಿ ಸಿ. ರಮೇಶ್ ಹೊಸದೊಡ್ಡಿ, ಸದಸ್ಯ ಪ್ರಭು ಅಂಜನಾಪುರ ಹಾಜರಿದ್ದರು.