<p>ಕನಕಪುರ: ತಾಲ್ಲೂಕಿನ ಪ್ರಸಿದ್ಧ ಶ್ವೇತಾದ್ರಿ ಗಿರಿ ಬಿಳಿಕಲ್ ಬೆಟ್ಟದ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಮತ್ತು ಜಾತ್ರೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.<br /> <br /> ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಮಾಜಿ ಪುರಸಭಾ ಅಧ್ಯಕ್ಷರಾದ ಬಿ.ನಾಗರಾಜ್, ಸಮಾಜ ಸೇವಕ ಅನಿಲ್ಕುಮಾರ್ರವರು ಅವರು ರಂಗನಾಥಸ್ವಾಮಿ ರಥೋತ್ಸವ, ಲಕ್ಷ್ಮೀದೇವಿ ಸಮೇತ ಉತ್ಸವಕ್ಕೆ ಚಾಲನೆ ನೀಡಿದರು.<br /> <br /> ಉತ್ಸವದಲ್ಲಿ ರಥವು ದೇವಾಲಯದ ಆವರಣದಲ್ಲಿ ಸಂಚರಿಸಿತು. ಬೆಳಿಗ್ಗೆ 10 ಗಂಟೆಯಿಂದಲೇ ದೇವಾಲಯಕ್ಕೆ ಭಕ್ತ ಸಾಗರ ಹರಿದುಬಂತು. ಬಂದವರೆಲ್ಲ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನ ಭಾಗ್ಯ ಪಡೆದು ಪುನೀತರಾದರು. ರಥೋತ್ಸವ ಸಮಯದಲ್ಲಿ ಭಕ್ತರು ಹಣ್ಣು ಧವನ ಎಸೆದು ಭಕ್ತಿಭಾವ ಮೆರೆದರು.<br /> <br /> ಕನಕಪುರ ಸೇರಿದಂತೆ ಎಂ.ಮಣಿಮಂಬಾಳ್, ದುನ್ನಸಂದ್ರ, ತೋಕಸಂದ್ರ, ಬಾಚಳ್ಳಿದೊಡ್ಡಿ, ಸುಂಡಘಟ್ಟ, ಬೆಟ್ಟೇಗೌಡನದೊಡ್ಡಿ, ಮರಳವಾಡಿ, ಮಳಗಾಳು, ಜವನ್ನಮ್ಮನದೊಡ್ಡಿ, ಗೌಡಹಳ್ಳಿ ಸೇರಿದಂತೆ ಸುತ್ತ-ಮುತ್ತಲ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಪ್ರಧಾನ ಅರ್ಚಕ ಎಂ.ವಿ.ಕೃಷ್ಣಮೂರ್ತಿ, ಹಾರೋಹಳ್ಳಿ ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜ್, ಮುಖಂಡರಾದ ಸಿದ್ದಮರಿಗೌಡ, ಪುಟ್ಟರಾಜು, ಸ್ಟುಡಿಯೋ ಚಂದ್ರು, ಗಣೇಶ್ರಾವ್ ಸೇರಿದಂತೆ ಅನೇಕರು ಹಾಜರಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. <br /> <br /> ದೂಳಿನ ಅಭಿಷೇಕ: ಸುಂಡಘಟ್ಟ ಗ್ರಾಮದಿಂದ ದೇವಸ್ಥಾನಕ್ಕೆ 3 ಕಿ.ಮೀ. ದೂರವಿದೆ. ಈ ರಸ್ತೆಗೆ ಡಾಂಬರ್ ಹಾಕಿಸಿಲ್ಲ. ಕಲ್ಲು- ದೂಳಿನಿಂದ ಕೂಡಿದ ರಸ್ತೆಯಲ್ಲಿ ವಾಹನಗಳ ದಟ್ಟಣೆ. ಇದರಿಂದಾಗಿ ಭಕ್ತರಿಗೆ ದೂಳಿನ ಅಭಿಷೇಕವಾಯಿತು. <br /> <br /> ಸಂಬಂಧಪಟ್ಟ ಇಲಾಖೆಯವರು ರಸ್ತೆಗೆ ಕನಿಷ್ಠ ನೀರು ಹಾಕಿಸಿದ್ದರೆ ಈ ತೊಂದರೆ ಯಾಗುತ್ತಿರಲಿಲ್ಲ. 2 ವರ್ಷಗಳ ಹಿಂದೆ ಜಾತ್ರೆ ಸಮಯದಲ್ಲಿ ನೀರು ಚಿಮುಕಿಸಿ ದೂಳು ಅಡಗಿಸಲಾಗಿತ್ತು. ಈ ಬಾರಿ ಅಂಥ ಕ್ರಮ ಕೈಗೊಂಡಿಲ್ಲವೆಂದು ಭಕ್ತರು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನಕಪುರ: ತಾಲ್ಲೂಕಿನ ಪ್ರಸಿದ್ಧ ಶ್ವೇತಾದ್ರಿ ಗಿರಿ ಬಿಳಿಕಲ್ ಬೆಟ್ಟದ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಮತ್ತು ಜಾತ್ರೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.<br /> <br /> ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಮಾಜಿ ಪುರಸಭಾ ಅಧ್ಯಕ್ಷರಾದ ಬಿ.ನಾಗರಾಜ್, ಸಮಾಜ ಸೇವಕ ಅನಿಲ್ಕುಮಾರ್ರವರು ಅವರು ರಂಗನಾಥಸ್ವಾಮಿ ರಥೋತ್ಸವ, ಲಕ್ಷ್ಮೀದೇವಿ ಸಮೇತ ಉತ್ಸವಕ್ಕೆ ಚಾಲನೆ ನೀಡಿದರು.<br /> <br /> ಉತ್ಸವದಲ್ಲಿ ರಥವು ದೇವಾಲಯದ ಆವರಣದಲ್ಲಿ ಸಂಚರಿಸಿತು. ಬೆಳಿಗ್ಗೆ 10 ಗಂಟೆಯಿಂದಲೇ ದೇವಾಲಯಕ್ಕೆ ಭಕ್ತ ಸಾಗರ ಹರಿದುಬಂತು. ಬಂದವರೆಲ್ಲ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನ ಭಾಗ್ಯ ಪಡೆದು ಪುನೀತರಾದರು. ರಥೋತ್ಸವ ಸಮಯದಲ್ಲಿ ಭಕ್ತರು ಹಣ್ಣು ಧವನ ಎಸೆದು ಭಕ್ತಿಭಾವ ಮೆರೆದರು.<br /> <br /> ಕನಕಪುರ ಸೇರಿದಂತೆ ಎಂ.ಮಣಿಮಂಬಾಳ್, ದುನ್ನಸಂದ್ರ, ತೋಕಸಂದ್ರ, ಬಾಚಳ್ಳಿದೊಡ್ಡಿ, ಸುಂಡಘಟ್ಟ, ಬೆಟ್ಟೇಗೌಡನದೊಡ್ಡಿ, ಮರಳವಾಡಿ, ಮಳಗಾಳು, ಜವನ್ನಮ್ಮನದೊಡ್ಡಿ, ಗೌಡಹಳ್ಳಿ ಸೇರಿದಂತೆ ಸುತ್ತ-ಮುತ್ತಲ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಪ್ರಧಾನ ಅರ್ಚಕ ಎಂ.ವಿ.ಕೃಷ್ಣಮೂರ್ತಿ, ಹಾರೋಹಳ್ಳಿ ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜ್, ಮುಖಂಡರಾದ ಸಿದ್ದಮರಿಗೌಡ, ಪುಟ್ಟರಾಜು, ಸ್ಟುಡಿಯೋ ಚಂದ್ರು, ಗಣೇಶ್ರಾವ್ ಸೇರಿದಂತೆ ಅನೇಕರು ಹಾಜರಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. <br /> <br /> ದೂಳಿನ ಅಭಿಷೇಕ: ಸುಂಡಘಟ್ಟ ಗ್ರಾಮದಿಂದ ದೇವಸ್ಥಾನಕ್ಕೆ 3 ಕಿ.ಮೀ. ದೂರವಿದೆ. ಈ ರಸ್ತೆಗೆ ಡಾಂಬರ್ ಹಾಕಿಸಿಲ್ಲ. ಕಲ್ಲು- ದೂಳಿನಿಂದ ಕೂಡಿದ ರಸ್ತೆಯಲ್ಲಿ ವಾಹನಗಳ ದಟ್ಟಣೆ. ಇದರಿಂದಾಗಿ ಭಕ್ತರಿಗೆ ದೂಳಿನ ಅಭಿಷೇಕವಾಯಿತು. <br /> <br /> ಸಂಬಂಧಪಟ್ಟ ಇಲಾಖೆಯವರು ರಸ್ತೆಗೆ ಕನಿಷ್ಠ ನೀರು ಹಾಕಿಸಿದ್ದರೆ ಈ ತೊಂದರೆ ಯಾಗುತ್ತಿರಲಿಲ್ಲ. 2 ವರ್ಷಗಳ ಹಿಂದೆ ಜಾತ್ರೆ ಸಮಯದಲ್ಲಿ ನೀರು ಚಿಮುಕಿಸಿ ದೂಳು ಅಡಗಿಸಲಾಗಿತ್ತು. ಈ ಬಾರಿ ಅಂಥ ಕ್ರಮ ಕೈಗೊಂಡಿಲ್ಲವೆಂದು ಭಕ್ತರು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>