<p><strong>ಮಾಗಡಿ: </strong>ತಾಲ್ಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕಡಿಮೆ ತೂಕ ಮತ್ತು ಕಳ ಪೆಯಿಂದ ಕೂಡಿರುವ ದೋಷ ಪೂರಿತ ಆಹಾರ ಸರಬರಾಜು ಮಾಡುತ್ತಿ ರುವವರ ವಿರುದ್ಧ ಕೇಸು ದಾಖಲಿಸು ವಂತೆ ತಾ.ಪಂ. ಹಿರಿಯ ಸದಸ್ಯ ಜಿ.ವಿ.ರಾಮಣ್ಣ ಆಗ್ರಹ ಪಡಿಸಿ ದರು.<br /> ಅವರು ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತ ನಾಡಿದರು.<br /> <br /> ತಾಲ್ಲೂಕಿನಲ್ಲಿ ಇರುವ ಅಂಗನ ವಾಡಿ ಕೇಂದ್ರಗಳಿಗೆ ಒದಗಿಸುತ್ತಿರುವ ಆಹಾರದಲ್ಲಿ ಹುಳುಗಳಿವೆ. ಗುಣಮಟ್ಟ ಸಹ ಸರಿಯಿಲ್ಲ. ಮುಗ್ಧ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಿ ಹಣ ಮಾಡುವ ದಲ್ಲಾಳಿಗಳಿಗೆ ತಕ್ಕ ಶಿಕ್ಷೆ ಯಾಗಬೇಕಿದೆ ಎಂದರು.<br /> <br /> ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿ ರುವ ಕಡಲೆ ಬೀಜ ಮತ್ತು ಬೆಲ್ಲದ ಕವರುಗಳನ್ನು ಅವರು ಪ್ರದರ್ಶಿಸಿ ಪೊಟ್ಟಣಗಳಲ್ಲಿ ಹುಳುಗಳಿರುವುದನ್ನು ತೋರಿಸಿದರು. ಎಲ್ಲಾ ಸದಸ್ಯರು ಜಿ.ವಿ.ರಾಮಣ್ಣ ಅವರ ದೂರನ್ನು ಬೆಂಬಲಿಸಿದರು.</p>.<p><br /> ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿ.ಕೃಷ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಇಲಾ ಖೆಯ ದಾದಿಯರು ಮತ್ತು ಆರೋಗ್ಯ ಸಹಾಯಕರು ಕೆಲಸ ಮಾಡುವ ಗ್ರಾಮಗಳಲ್ಲಿಯೇ ವಾಸಿಸಬೇಕಿದೆ. ಇಲ್ಲವಾದಲ್ಲಿ ಸಂಬಳ ಕಡಿತ ಗೊಳಿಸ ಲಾಗುವುದು ಎಂದು ಎಚ್ಚರಿಸಿದರು.<br /> <br /> ತಾ.ಪಂ.ಉಪಾಧ್ಯಕ್ಷೆ ಭಾರತಿ ಮಹದೇವಯ್ಯ, ತಾ.ಪಂ.ಇಒ ಕೆ.ಬಿ.ಅಕ್ಕೋಜಿ, ತಾ.ಪಂ. ಸದಸ್ಯರಾದ ಎಂ.ರಾಮಣ್ಣ, ಎಸ್.ಕಾಂತರಾಜು ಇತರರು ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ: </strong>ತಾಲ್ಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕಡಿಮೆ ತೂಕ ಮತ್ತು ಕಳ ಪೆಯಿಂದ ಕೂಡಿರುವ ದೋಷ ಪೂರಿತ ಆಹಾರ ಸರಬರಾಜು ಮಾಡುತ್ತಿ ರುವವರ ವಿರುದ್ಧ ಕೇಸು ದಾಖಲಿಸು ವಂತೆ ತಾ.ಪಂ. ಹಿರಿಯ ಸದಸ್ಯ ಜಿ.ವಿ.ರಾಮಣ್ಣ ಆಗ್ರಹ ಪಡಿಸಿ ದರು.<br /> ಅವರು ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತ ನಾಡಿದರು.<br /> <br /> ತಾಲ್ಲೂಕಿನಲ್ಲಿ ಇರುವ ಅಂಗನ ವಾಡಿ ಕೇಂದ್ರಗಳಿಗೆ ಒದಗಿಸುತ್ತಿರುವ ಆಹಾರದಲ್ಲಿ ಹುಳುಗಳಿವೆ. ಗುಣಮಟ್ಟ ಸಹ ಸರಿಯಿಲ್ಲ. ಮುಗ್ಧ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಿ ಹಣ ಮಾಡುವ ದಲ್ಲಾಳಿಗಳಿಗೆ ತಕ್ಕ ಶಿಕ್ಷೆ ಯಾಗಬೇಕಿದೆ ಎಂದರು.<br /> <br /> ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿ ರುವ ಕಡಲೆ ಬೀಜ ಮತ್ತು ಬೆಲ್ಲದ ಕವರುಗಳನ್ನು ಅವರು ಪ್ರದರ್ಶಿಸಿ ಪೊಟ್ಟಣಗಳಲ್ಲಿ ಹುಳುಗಳಿರುವುದನ್ನು ತೋರಿಸಿದರು. ಎಲ್ಲಾ ಸದಸ್ಯರು ಜಿ.ವಿ.ರಾಮಣ್ಣ ಅವರ ದೂರನ್ನು ಬೆಂಬಲಿಸಿದರು.</p>.<p><br /> ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿ.ಕೃಷ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಇಲಾ ಖೆಯ ದಾದಿಯರು ಮತ್ತು ಆರೋಗ್ಯ ಸಹಾಯಕರು ಕೆಲಸ ಮಾಡುವ ಗ್ರಾಮಗಳಲ್ಲಿಯೇ ವಾಸಿಸಬೇಕಿದೆ. ಇಲ್ಲವಾದಲ್ಲಿ ಸಂಬಳ ಕಡಿತ ಗೊಳಿಸ ಲಾಗುವುದು ಎಂದು ಎಚ್ಚರಿಸಿದರು.<br /> <br /> ತಾ.ಪಂ.ಉಪಾಧ್ಯಕ್ಷೆ ಭಾರತಿ ಮಹದೇವಯ್ಯ, ತಾ.ಪಂ.ಇಒ ಕೆ.ಬಿ.ಅಕ್ಕೋಜಿ, ತಾ.ಪಂ. ಸದಸ್ಯರಾದ ಎಂ.ರಾಮಣ್ಣ, ಎಸ್.ಕಾಂತರಾಜು ಇತರರು ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>