<p><strong>ಶಿವಮೊಗ್ಗ</strong>: ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ ಬಳಿ ಸೆರೆಹಿಡಿದು ಸಕ್ರೆಬೈಲಿನ ಬಿಡಾರಕ್ಕೆ ತಂದಿದ್ದ 22 ವರ್ಷದ ಆನೆಯನ್ನು ಭದ್ರಾಅಭಯಾರಣ್ಯಕ್ಕೆಬಿಡಲು ವನ್ಯಜೀವಿ ವಿಭಾಗದ ಅಧಿಕಾರಿಗಳು ನಿರ್ಧರಿಸಿದ್ದಾರೆ.</p>.<p>ಆನೆ ಸೌಮ್ಯ ಸ್ವಭಾವ ಹೊಂದಿದೆ.ಜೋಗಿಮಟ್ಟಿ ಪ್ರದೇಶದಲ್ಲಿ ಸೆರೆ ಹಿಡಿಯುವ ಮೊದಲೂ ಯಾವುದೇ ಜೀವ ಹಾನಿ ನಡೆಸಿಲ್ಲ. ಬೆಳೆಹಾನಿ ಮಾಡುತ್ತಿದೆ ಎಂಬ ರೈತರ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಸೆರೆ ಹಿಡಿದಿದ್ದರು. ಬಿಡಾರಕ್ಕೆ ಬಂದ ನಂತರವೂ ಸೌಮ್ಯ ವರ್ತನೆ ತೋರಿದೆ. ಅಕ್ರಮಣಕಾರಿಯಾಗಿ ವರ್ತಿಸಿಲ್ಲ.ಸಕ್ರೆಬೈಲ್ ಆನೆ ಬಿಡಾರದಲ್ಲಿ ಪ್ರಸ್ತುತ 25 ಆನೆಗಳಿವೆ. ಹೈಕೋರ್ಟ್ ನಿರ್ದೇಶನದಂತೆ ಯಾವುದೇ ಬಿಡಾರದಲ್ಲಿ 15ಕ್ಕಿಂತ ಹೆಚ್ಚು ಆನೆಗಳು ಇರುವಂತಿಲ್ಲ. ಈ ಎಲ್ಲ ಕಾರಣಗಳಿಂದ ಆನೆಯನ್ನು ಮತ್ತೆ ಕಾಡಿಗೇ ಬಿಡಲಾಗುತ್ತಿದೆ ಎಂದು ಸುದ್ದಿ ಹರಿದಾಡುತ್ತಿದೆ.</p>.<p>ಆನೆ ಕೊರಳಿಗೆರೇಡಿಯೊ ಕಾಲರ್ ಅಳವಡಿಸಿ, ಮೊಬೈಲ್ ತಂತ್ರಾಂಶದ ಮೂಲಕ ಅದರ ಚಲನವಲನಗಳ ಮೇಲೆ ನಿಗಾವಹಿಸಲು ಆಲೋಚಿಸಲಾಗಿದೆ. ಆನೆ ಯಾವುದೇ ಪ್ರದೇಶದಲ್ಲಿ ಇದ್ದರೂ ಪತ್ತೆ ಹಚ್ಚಬಹುದು. ಜನನಿಬಿಡ ಪ್ರದೇಶಗಳತ್ತ ಸಾಗಿದರೂ ತಕ್ಷಣ ಮಾಹಿತಿ ದೊರೆಯುತ್ತದೆ ಎನ್ನಲಾಗಿದೆ.</p>.<p>‘ಸೆರೆ ಹಿಡಿದ ಆನೆಯನ್ನು ಮತ್ತೆ ಕಾಡಿಗೆ ಬಿಡುವ ಯಾವುದೇ ಪ್ರಸ್ತಾವ ಇಲಾಖೆಯ ಮುಂದಿಲ್ಲ. ಮೇಲಧಿಕಾರಿಗಳಿಂದ ಆದೇಶ ಬಂದರಷ್ಟೇ ಪರಿಶೀಲಿಸಲಾಗುವುದು.ಒಮ್ಮೆ ಹಿಡಿದ ಆನೆಯನ್ನು ಮತ್ತೆ ಕಾಡಿಗೆ ಬಿಟ್ಟ ಉದಾಹರಣೆಯೇ ಇಲ್ಲ’ ಎನ್ನುತ್ತಾರೆ ವನ್ಯಜೀವಿ ವಿಭಾಗದ ಡಿಎಫ್ಒ ಐ.ಎಂ.ನಾಗರಾಜ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ ಬಳಿ ಸೆರೆಹಿಡಿದು ಸಕ್ರೆಬೈಲಿನ ಬಿಡಾರಕ್ಕೆ ತಂದಿದ್ದ 22 ವರ್ಷದ ಆನೆಯನ್ನು ಭದ್ರಾಅಭಯಾರಣ್ಯಕ್ಕೆಬಿಡಲು ವನ್ಯಜೀವಿ ವಿಭಾಗದ ಅಧಿಕಾರಿಗಳು ನಿರ್ಧರಿಸಿದ್ದಾರೆ.</p>.<p>ಆನೆ ಸೌಮ್ಯ ಸ್ವಭಾವ ಹೊಂದಿದೆ.ಜೋಗಿಮಟ್ಟಿ ಪ್ರದೇಶದಲ್ಲಿ ಸೆರೆ ಹಿಡಿಯುವ ಮೊದಲೂ ಯಾವುದೇ ಜೀವ ಹಾನಿ ನಡೆಸಿಲ್ಲ. ಬೆಳೆಹಾನಿ ಮಾಡುತ್ತಿದೆ ಎಂಬ ರೈತರ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಸೆರೆ ಹಿಡಿದಿದ್ದರು. ಬಿಡಾರಕ್ಕೆ ಬಂದ ನಂತರವೂ ಸೌಮ್ಯ ವರ್ತನೆ ತೋರಿದೆ. ಅಕ್ರಮಣಕಾರಿಯಾಗಿ ವರ್ತಿಸಿಲ್ಲ.ಸಕ್ರೆಬೈಲ್ ಆನೆ ಬಿಡಾರದಲ್ಲಿ ಪ್ರಸ್ತುತ 25 ಆನೆಗಳಿವೆ. ಹೈಕೋರ್ಟ್ ನಿರ್ದೇಶನದಂತೆ ಯಾವುದೇ ಬಿಡಾರದಲ್ಲಿ 15ಕ್ಕಿಂತ ಹೆಚ್ಚು ಆನೆಗಳು ಇರುವಂತಿಲ್ಲ. ಈ ಎಲ್ಲ ಕಾರಣಗಳಿಂದ ಆನೆಯನ್ನು ಮತ್ತೆ ಕಾಡಿಗೇ ಬಿಡಲಾಗುತ್ತಿದೆ ಎಂದು ಸುದ್ದಿ ಹರಿದಾಡುತ್ತಿದೆ.</p>.<p>ಆನೆ ಕೊರಳಿಗೆರೇಡಿಯೊ ಕಾಲರ್ ಅಳವಡಿಸಿ, ಮೊಬೈಲ್ ತಂತ್ರಾಂಶದ ಮೂಲಕ ಅದರ ಚಲನವಲನಗಳ ಮೇಲೆ ನಿಗಾವಹಿಸಲು ಆಲೋಚಿಸಲಾಗಿದೆ. ಆನೆ ಯಾವುದೇ ಪ್ರದೇಶದಲ್ಲಿ ಇದ್ದರೂ ಪತ್ತೆ ಹಚ್ಚಬಹುದು. ಜನನಿಬಿಡ ಪ್ರದೇಶಗಳತ್ತ ಸಾಗಿದರೂ ತಕ್ಷಣ ಮಾಹಿತಿ ದೊರೆಯುತ್ತದೆ ಎನ್ನಲಾಗಿದೆ.</p>.<p>‘ಸೆರೆ ಹಿಡಿದ ಆನೆಯನ್ನು ಮತ್ತೆ ಕಾಡಿಗೆ ಬಿಡುವ ಯಾವುದೇ ಪ್ರಸ್ತಾವ ಇಲಾಖೆಯ ಮುಂದಿಲ್ಲ. ಮೇಲಧಿಕಾರಿಗಳಿಂದ ಆದೇಶ ಬಂದರಷ್ಟೇ ಪರಿಶೀಲಿಸಲಾಗುವುದು.ಒಮ್ಮೆ ಹಿಡಿದ ಆನೆಯನ್ನು ಮತ್ತೆ ಕಾಡಿಗೆ ಬಿಟ್ಟ ಉದಾಹರಣೆಯೇ ಇಲ್ಲ’ ಎನ್ನುತ್ತಾರೆ ವನ್ಯಜೀವಿ ವಿಭಾಗದ ಡಿಎಫ್ಒ ಐ.ಎಂ.ನಾಗರಾಜ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>