ಆನೆ ಸೌಮ್ಯ ಸ್ವಭಾವ ಹೊಂದಿದೆ.ಜೋಗಿಮಟ್ಟಿ ಪ್ರದೇಶದಲ್ಲಿ ಸೆರೆ ಹಿಡಿಯುವ ಮೊದಲೂ ಯಾವುದೇ ಜೀವ ಹಾನಿ ನಡೆಸಿಲ್ಲ. ಬೆಳೆಹಾನಿ ಮಾಡುತ್ತಿದೆ ಎಂಬ ರೈತರ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಸೆರೆ ಹಿಡಿದಿದ್ದರು. ಬಿಡಾರಕ್ಕೆ ಬಂದ ನಂತರವೂ ಸೌಮ್ಯ ವರ್ತನೆ ತೋರಿದೆ. ಅಕ್ರಮಣಕಾರಿಯಾಗಿ ವರ್ತಿಸಿಲ್ಲ.ಸಕ್ರೆಬೈಲ್ ಆನೆ ಬಿಡಾರದಲ್ಲಿ ಪ್ರಸ್ತುತ 25 ಆನೆಗಳಿವೆ. ಹೈಕೋರ್ಟ್ ನಿರ್ದೇಶನದಂತೆ ಯಾವುದೇ ಬಿಡಾರದಲ್ಲಿ 15ಕ್ಕಿಂತ ಹೆಚ್ಚು ಆನೆಗಳು ಇರುವಂತಿಲ್ಲ. ಈ ಎಲ್ಲ ಕಾರಣಗಳಿಂದ ಆನೆಯನ್ನು ಮತ್ತೆ ಕಾಡಿಗೇ ಬಿಡಲಾಗುತ್ತಿದೆ ಎಂದು ಸುದ್ದಿ ಹರಿದಾಡುತ್ತಿದೆ.