‘1992ರ ಡಿಸೆಂಬರ್ 6ರಂದು ಉತ್ತರ ಪ್ರದೇಶ ರಾಜ್ಯದ ಫೈಜಾಬಾದ್ ಜಿಲ್ಲೆಯಲ್ಲಿರುವ ಸುಮಾರು 500 ವರ್ಷ ಇತಿಹಾಸವುಳ್ಳ ಬಾಬರಿ ಮಸೀದಿಯನ್ನು ದುಷ್ಟರು ಹಾನಿಗೊಳಿಸಿ, ಧ್ವಂಸಗೊಳಿಸಿದರು. ಇದರಿಂದ ದೇಶದ ಸಾಮರಸ್ಯ, ಜಾತ್ಯಾತೀತ ನಿಲುವು ಹಾಗೂ ಸಾಂವಿಧಾನಿಕ ಮೌಲ್ಯಗಳ ಕೊಲೆ ಮಾಡಲು ಯತ್ನಿಸಿದರು. ಇದರಿಂದ ದೇಶದ ಹಲವು ಭಾಗಗಳಲ್ಲಿ ಶಾಂತಿ ಸುವ್ಯವಸ್ಥೆ ಭಂಗವಾಗಿ ಅಲ್ಲಲ್ಲಿ ಕೋಮು ಗಲಭೆ ನಡೆದು, ಅಮಾಯಕರು ತಮ್ಮ ಜೀವನವನ್ನು ಬಲಿ ಕೊಡಬೇಕಾಯಿತು’ ಎಂದು ಪ್ರತಿಭಟನಾಕಾರರು ವಿಷಾದಿಸಿದರು.