ಭಾರಿ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ನೆರೆಹಾವಳಿ ಉಂಟಾಗಿದ್ದು,ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭದ್ರಾವತಿ ತಾಲ್ಲೂಕಿನ ಎರೇಹಳ್ಳಿಯಲ್ಲಿ ಷಣ್ಮುಖ (35) ಎಂಬ ವ್ಯಕ್ತಿ ಮೀನು ಹಿಡಿಯಲು ಹೋಗಿ ಮೃತಪಟ್ಟಿದ್ದಾರೆ. ಸಾಗರ ತಾಲ್ಲೂಕಿನ ಯಡಜಿಗಳಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಕಟವಳ್ಳಿಯ ಮೂರುಕಟ್ಟೆಯ ಹಕ್ಕಲುಮನೆ ತಿಮ್ಮನಾಯ್ಕ (70) ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಜಾನುವಾರು ಮೇಯಿಸಲು ಹೋದಾಗ ಕಾಲು ಜಾರಿ ಶರಾವತಿ ಹಿನ್ನೀರಿಗೆ ಅವರು ಬಿದ್ದಿದ್ದರು.