ಶಿವಮೊಗ್ಗ: ಡೆಬಿಟ್ ಕಾರ್ಡ್ ಅವಧಿ ಮುಗಿದಿದೆ ಎಂದು ಕರೆ ಮಾಡಿ, ವ್ಯಕ್ತಿಯೊಬ್ಬರಿಗೆ ₹ 1.5 ಲಕ್ಷ ವಂಚಿಸಲಾಗಿದೆ.
ಶಿವಮೊಗ್ಗದ ವಿನೋಬನಗರದ ಶಿವಪ್ಪ ನಾಯಕ ಬಡಾವಣೆಯ ನಿವಾಸಿ ಕುಮಾರಸ್ವಾಮಿ ಅವರು ಹಣ ಕಳೆದುಕೊಂಡವರು.
ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ‘ನಿಮ್ಮ ಡೆಬಿಟ್ ಕಾರ್ಡ್ ಅವಧಿ ಮುಗಿದಿದೆ. ಬ್ಯಾಂಕ್ ಮತ್ತು ಡೆಬಿಟ್ ಕಾರ್ಡ್ನ ವಿವರಣೆ ನೀಡಿ’ ಎಂದು ಮಾಹಿತಿ ಪಡೆದುಕೊಂಡು ಅವರ ಖಾತೆಯಿಂದ ಒಟ್ಟು ₹ 1.5 ಲಕ್ಷ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.