<p><strong>ಹೊಳೆಹೊನ್ನೂರು</strong>: ಅಕಾಲಿಕವಾಗಿ ಮೃತಪಟ್ಟ ತಮ್ಮ ಮಗನ ಸ್ಮರಣಾರ್ಥ ಶಿಕ್ಷಕರೊಬ್ಬರು, ತಾವು ಶಾಲೆಯಲ್ಲಿ ರಂಗಮಂದಿರ ನಿರ್ಮಿಸಿದ್ದಾರೆ. ಇಲ್ಲಿಗೆ ಸಮೀಪದ ಚಂದನಕೆರೆ ಶಾಲೆ ಶಿಕ್ಷಕ ಬಿ.ಜಿ.ಮಹೇಶ್ವರಪ್ಪ ಅವರು ತಮ್ಮ ಮಗ ಜಿ.ಎಂ.ಮುರಳಿ ಸ್ಮರಣಾರ್ಥ ಚಂದನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಂತ ಖರ್ಚಿನಲ್ಲಿ ರಂಗಮಂದಿರ ಕಟ್ಟಿಸಿದ್ದಾರೆ. </p>.<p>ಮಂಗಳವಾರ ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಕ ಬಿ. ಜಿ. ಮಹೇಶ್ವರಪ್ಪ ಅವರು, ‘2012ರಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಹೃದಯಾಘಾತದಿಂದ ಮಗನನ್ನು ಕಳೆದುಕೊಂಡಿದ್ದು ಅತೀವ ನೋವುಂಟು ಮಾಡಿತು. ಅವನ ಹೆಸರಲ್ಲಿ ಸಾರ್ವಜನಿಕ ಸೇವೆ ಮಾಡಲು ನಿರ್ಧರಿಸಿ, ರಂಗಮಂದಿರ ಕಟ್ಟಿದ್ದೇನೆ’ ಎಂದರು.</p>.<p>ಅಂದಾಜು ₹3 ಲಕ್ಷ ವೆಚ್ಚದಲ್ಲಿ ರಂಗಮಂದಿರ ನಿರ್ಮಿಸಲಾಗಿದೆ. ನಾವು ಮಾಡುವ ಕೆಲಸದಿಂದ ಮುಂದಿನ ಯುವ ಪೀಳಿಗೆಗೆ ಅನುಕೂಲವಾಗಲಿ. ರಂಗಮಂದಿರದಿಂದ ಒಳ್ಳೆಯ ಕಲಾವಿದರು ಮೂಡಿಬರಲಿ ಎಂದು ಅವರು ಹಾರೈಸಿದರು.</p>.<p>‘ಯಾವುದೇ ಗ್ರಾಮದ ಅಭಿವೃದ್ಧಿಯನ್ನು ಅಲ್ಲಿನ ಶಾಲೆಯನ್ನು ನೋಡಿ ಅಳೆಯಬೇಕು. ಯಾವ ಊರಲ್ಲಿ ಒಂದು ಉತ್ತಮ ಶಾಲೆ ಇರುತ್ತದೋ ಅಲ್ಲಿ ಸುಭಿಕ್ಷೆ ಇರುತ್ತದೆ. ಕೊಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಇನ್ನೊಬ್ಬರಿಗೆ ಕೊಟ್ಟಾಗ ಅದರ ಬೆಲೆ ಹೆಚ್ಚಾಗುತ್ತದೆ’ ಎಂದು ಶಿಕ್ಷಕರ ಸಂಘದ ಅಧ್ಯಕ್ಷ ಪೃಥ್ವಿರಾಜ್ ಹೇಳಿದರು. </p>.<p>ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜಪ್ಪ ಸಿ.ಪಿ., ಇಂಜಿನಿಯರ್ ನಂದಗೋಪಾಲಗೌಡ್ರು, ಅಕ್ಷರ ದಾಸೋಹ ನಿರ್ವಾಹಣಾಧಿಕಾರಿ ಪ್ರಭಾಕರ್, ಚೈತ್ರ ಸೆಲ್ವರಾಜ್, ಹನುಮಂತಪ್ಪ ಎಸ್. ಓಂಕಾರಪ್ಪ. ರಂಗನಾಥ, ರೇಖಾ, ಭಾಗ್ಯಮ್ಮ, ಪವಿತ್ರ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆಹೊನ್ನೂರು</strong>: ಅಕಾಲಿಕವಾಗಿ ಮೃತಪಟ್ಟ ತಮ್ಮ ಮಗನ ಸ್ಮರಣಾರ್ಥ ಶಿಕ್ಷಕರೊಬ್ಬರು, ತಾವು ಶಾಲೆಯಲ್ಲಿ ರಂಗಮಂದಿರ ನಿರ್ಮಿಸಿದ್ದಾರೆ. ಇಲ್ಲಿಗೆ ಸಮೀಪದ ಚಂದನಕೆರೆ ಶಾಲೆ ಶಿಕ್ಷಕ ಬಿ.ಜಿ.ಮಹೇಶ್ವರಪ್ಪ ಅವರು ತಮ್ಮ ಮಗ ಜಿ.ಎಂ.ಮುರಳಿ ಸ್ಮರಣಾರ್ಥ ಚಂದನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಂತ ಖರ್ಚಿನಲ್ಲಿ ರಂಗಮಂದಿರ ಕಟ್ಟಿಸಿದ್ದಾರೆ. </p>.<p>ಮಂಗಳವಾರ ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಕ ಬಿ. ಜಿ. ಮಹೇಶ್ವರಪ್ಪ ಅವರು, ‘2012ರಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಹೃದಯಾಘಾತದಿಂದ ಮಗನನ್ನು ಕಳೆದುಕೊಂಡಿದ್ದು ಅತೀವ ನೋವುಂಟು ಮಾಡಿತು. ಅವನ ಹೆಸರಲ್ಲಿ ಸಾರ್ವಜನಿಕ ಸೇವೆ ಮಾಡಲು ನಿರ್ಧರಿಸಿ, ರಂಗಮಂದಿರ ಕಟ್ಟಿದ್ದೇನೆ’ ಎಂದರು.</p>.<p>ಅಂದಾಜು ₹3 ಲಕ್ಷ ವೆಚ್ಚದಲ್ಲಿ ರಂಗಮಂದಿರ ನಿರ್ಮಿಸಲಾಗಿದೆ. ನಾವು ಮಾಡುವ ಕೆಲಸದಿಂದ ಮುಂದಿನ ಯುವ ಪೀಳಿಗೆಗೆ ಅನುಕೂಲವಾಗಲಿ. ರಂಗಮಂದಿರದಿಂದ ಒಳ್ಳೆಯ ಕಲಾವಿದರು ಮೂಡಿಬರಲಿ ಎಂದು ಅವರು ಹಾರೈಸಿದರು.</p>.<p>‘ಯಾವುದೇ ಗ್ರಾಮದ ಅಭಿವೃದ್ಧಿಯನ್ನು ಅಲ್ಲಿನ ಶಾಲೆಯನ್ನು ನೋಡಿ ಅಳೆಯಬೇಕು. ಯಾವ ಊರಲ್ಲಿ ಒಂದು ಉತ್ತಮ ಶಾಲೆ ಇರುತ್ತದೋ ಅಲ್ಲಿ ಸುಭಿಕ್ಷೆ ಇರುತ್ತದೆ. ಕೊಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಇನ್ನೊಬ್ಬರಿಗೆ ಕೊಟ್ಟಾಗ ಅದರ ಬೆಲೆ ಹೆಚ್ಚಾಗುತ್ತದೆ’ ಎಂದು ಶಿಕ್ಷಕರ ಸಂಘದ ಅಧ್ಯಕ್ಷ ಪೃಥ್ವಿರಾಜ್ ಹೇಳಿದರು. </p>.<p>ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜಪ್ಪ ಸಿ.ಪಿ., ಇಂಜಿನಿಯರ್ ನಂದಗೋಪಾಲಗೌಡ್ರು, ಅಕ್ಷರ ದಾಸೋಹ ನಿರ್ವಾಹಣಾಧಿಕಾರಿ ಪ್ರಭಾಕರ್, ಚೈತ್ರ ಸೆಲ್ವರಾಜ್, ಹನುಮಂತಪ್ಪ ಎಸ್. ಓಂಕಾರಪ್ಪ. ರಂಗನಾಥ, ರೇಖಾ, ಭಾಗ್ಯಮ್ಮ, ಪವಿತ್ರ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>