ತಾಯಿಯಿಂದ ಬೇರ್ಪಟ್ಟು ಭಯದಿಂದ ದಿಕ್ಕು ತಪ್ಪಿ ಊರಿಗೆ ಬಂದ ಕಡವೆ ಮರಿಯನ್ನು ಉಪಚರಿಸಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಉಪ ವಲಯಾರಣ್ಯಧಿಕಾರಿ ಸ್ಥಳಕ್ಕೆ ಬಂದು, ‘ಕಡವೆ ಮರಿಯನ್ನು ಹಗ್ಗದಲ್ಲಿ ಕಟ್ಟಿಹಾಕಿ ಗ್ರಾಮಸ್ಥರು ಇನ್ನು ರಕ್ಷಣೆ ಮಾಡುವ ಅಗತ್ಯವಿಲ್ಲ. ಅರಣ್ಯ ಇಲಾಖೆ ನೋಡಿಕೊಳ್ಳುತ್ತದೆ. ಈ ಬಗ್ಗೆ ಗ್ರಾಮಸ್ಥರು ನಿಗಾ ಬೇಕಿಲ್ಲ’ ಎಂದು ಸೂಚಿಸಿದರು.