<p><strong>ಶಿವಮೊಗ್ಗ</strong>:ನೋಂದಾಯಿಸದ, ತೆರೆ ಮರೆಯಲ್ಲೇ ದುಡಿಯುವ ಅಸಂಘಟಿತ ಕಾರ್ಮಿಕರಿಗೂ ಸರ್ಕಾರನೆರವಾಗಬೇಕು. ಹೆಚ್ಚುವರಿ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಆಯನೂರು ಮಂಜುನಾಥ್ ಒತ್ತಾಯಿಸಿದರು.</p>.<p>ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುಮಾರು 1,610ಕೋಟಿ ರು.ಪ್ಯಾಕೇಜ್ ಘೋಷಿಸುವ ಮೂಲಕ ಕಾರ್ಮಿಕರ,ರೈತರ ನೆರವಿಗೆ ನಿಂತಿದ್ದಾರೆ. ಅವರಿಗೆ ಕೃತಜ್ಞತೆಸಲ್ಲಿಸಬೇಕು. ಜತೆಗೆ,ಹಲವುಸಣ್ಣಪುಟ್ಟ ಬಡ ಕುಟುಂಬಗಳು, ಲೆಕ್ಕಕ್ಕೆ ಸಿಗದ ಅಸಂಘಟಿತ ಕಾರ್ಮಿಕರುಇದ್ದಾರೆ.ಅಂಥ ವರ್ಗಗಳನ್ನು ಗುರುತಿಸಬೇಕು.ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.</p>.<p>ಶ್ರೀಮಂತರ ಮನೆಗಳಲ್ಲಿಕಸ, ಮುಸುರೆ ಕೆಲಸ ಮಾಡುವ ಹೆಣ್ಣು ಮಕ್ಕಳು, ಟೈಲರ್ಗಳು,ಹಮಾಲರು, ಚಿನ್ನ ಬೆಳ್ಳಿ ಕೆಲಸ ಮಾಡುವವರು, ನೋಂದಾಯಿಸದ ಕ್ಷೌರಿಕರು, ಕುಂಬಾರರು ನಿತ್ಯದದುಡಿಮೆ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದರು. ಈಗ ಕೆಲಸ ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಾರೆ.<br />ಎಪಿಎಂಸಿಯಲ್ಲೂನೋಂದಾಯಿಸದ ಹಮಾಲರು, ತೂಕ ಮಾಡುವವರು, ದಿನಗೂಲಿ ಕೆಲಸ ಮಾಡುವವರು ಇದ್ದಾರೆ. ಅವರೆಲ್ಲರಿಗೂ ಆಯಾ ಎಪಿಎಂಸಿಗಳೇ ಹಣದ ನೆರವು ನೀಡುವಂತೆ ನಿರ್ದೇಶನ ನೀಡಬೇಕು. ಸಚಿವರು ಗಮನ ಹರಿಸಬೇಕು ಎಂದು ಆಗ್ರಹಿಸಿದರು.</p>.<p>ವಲಸೆ ಕಾರ್ಮಿಕರುಈಗಾಗಲೇತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಸುಮಾರು 80 ಲಕ್ಷ ಜನರು ಮೂಲ ಸ್ಥಳಗಳಿಗೆ ಹಿಂದಿರುಗಿದ್ದಾರೆ. ಆದರೂ,ಸರ್ಕಾರನೀಡಿದಕಿಟ್ಗಳು ಅಷ್ಟೇ ಪ್ರಮಾಣದಲ್ಲಿ ಖರ್ಚಾಗುತ್ತಿವೆ.ಆಹಾರ ಪದಾರ್ಥಗಳ ಕಿಟ್ ದುರುಪಯೋಗವಾಗುತ್ತಿವೆ.ನಿಜವಾದ ಫಲಾನುಭವಿಗಳಿಗೆ ತಲುಪಲು ಕ್ರಮ ಕೈಗೊಳ್ಳಬೇಕು ಎಂದರು.<br /><br />ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಮುಖಂಡರಾದ ರವಿ, ಸುಬ್ರಮಣ್ಯ, ಈಶ್ವರಪ್ಪಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>:ನೋಂದಾಯಿಸದ, ತೆರೆ ಮರೆಯಲ್ಲೇ ದುಡಿಯುವ ಅಸಂಘಟಿತ ಕಾರ್ಮಿಕರಿಗೂ ಸರ್ಕಾರನೆರವಾಗಬೇಕು. ಹೆಚ್ಚುವರಿ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಆಯನೂರು ಮಂಜುನಾಥ್ ಒತ್ತಾಯಿಸಿದರು.</p>.<p>ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುಮಾರು 1,610ಕೋಟಿ ರು.ಪ್ಯಾಕೇಜ್ ಘೋಷಿಸುವ ಮೂಲಕ ಕಾರ್ಮಿಕರ,ರೈತರ ನೆರವಿಗೆ ನಿಂತಿದ್ದಾರೆ. ಅವರಿಗೆ ಕೃತಜ್ಞತೆಸಲ್ಲಿಸಬೇಕು. ಜತೆಗೆ,ಹಲವುಸಣ್ಣಪುಟ್ಟ ಬಡ ಕುಟುಂಬಗಳು, ಲೆಕ್ಕಕ್ಕೆ ಸಿಗದ ಅಸಂಘಟಿತ ಕಾರ್ಮಿಕರುಇದ್ದಾರೆ.ಅಂಥ ವರ್ಗಗಳನ್ನು ಗುರುತಿಸಬೇಕು.ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.</p>.<p>ಶ್ರೀಮಂತರ ಮನೆಗಳಲ್ಲಿಕಸ, ಮುಸುರೆ ಕೆಲಸ ಮಾಡುವ ಹೆಣ್ಣು ಮಕ್ಕಳು, ಟೈಲರ್ಗಳು,ಹಮಾಲರು, ಚಿನ್ನ ಬೆಳ್ಳಿ ಕೆಲಸ ಮಾಡುವವರು, ನೋಂದಾಯಿಸದ ಕ್ಷೌರಿಕರು, ಕುಂಬಾರರು ನಿತ್ಯದದುಡಿಮೆ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದರು. ಈಗ ಕೆಲಸ ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಾರೆ.<br />ಎಪಿಎಂಸಿಯಲ್ಲೂನೋಂದಾಯಿಸದ ಹಮಾಲರು, ತೂಕ ಮಾಡುವವರು, ದಿನಗೂಲಿ ಕೆಲಸ ಮಾಡುವವರು ಇದ್ದಾರೆ. ಅವರೆಲ್ಲರಿಗೂ ಆಯಾ ಎಪಿಎಂಸಿಗಳೇ ಹಣದ ನೆರವು ನೀಡುವಂತೆ ನಿರ್ದೇಶನ ನೀಡಬೇಕು. ಸಚಿವರು ಗಮನ ಹರಿಸಬೇಕು ಎಂದು ಆಗ್ರಹಿಸಿದರು.</p>.<p>ವಲಸೆ ಕಾರ್ಮಿಕರುಈಗಾಗಲೇತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಸುಮಾರು 80 ಲಕ್ಷ ಜನರು ಮೂಲ ಸ್ಥಳಗಳಿಗೆ ಹಿಂದಿರುಗಿದ್ದಾರೆ. ಆದರೂ,ಸರ್ಕಾರನೀಡಿದಕಿಟ್ಗಳು ಅಷ್ಟೇ ಪ್ರಮಾಣದಲ್ಲಿ ಖರ್ಚಾಗುತ್ತಿವೆ.ಆಹಾರ ಪದಾರ್ಥಗಳ ಕಿಟ್ ದುರುಪಯೋಗವಾಗುತ್ತಿವೆ.ನಿಜವಾದ ಫಲಾನುಭವಿಗಳಿಗೆ ತಲುಪಲು ಕ್ರಮ ಕೈಗೊಳ್ಳಬೇಕು ಎಂದರು.<br /><br />ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಮುಖಂಡರಾದ ರವಿ, ಸುಬ್ರಮಣ್ಯ, ಈಶ್ವರಪ್ಪಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>