ಸ್ಥಳಕ್ಕೆ ಸಾಗರ ವಿಭಾಗ ಉಪಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ ಹಾಗೂ ಶಿಕಾರಿಪುರ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾ ನಾಯ್ಕ ಹಾಗೂ ಕರಡಿಗೆ ಅರಿವಳಿಕೆ ಮದ್ದು ನೀಡಲು ಬಂದಿದ್ದ ಶಿವಮೊಗ್ಗದ ವನ್ಯಜೀವಿ ವಿಭಾಗದ ಅರಿವಳಿಕೆ ತಜ್ಞ ಡಾ.ವಿನಯ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಛಾಯಾಗ್ರಾಹಕ ಕಿರಣ್ ದ್ರೋಣ್ ಕ್ಯಾಮೆರಾ ಬಳಸಿ ಕರಡಿ ಪತ್ತೆ ಹಚ್ಚಲು ಯತ್ನಿಸಿದರು. ಆದರೆ ಅದು ಫಲ ನೀಡಲಿಲ್ಲ. ನಂತರ ಮೆಕ್ಕೆಜೋಳದ ಬೆಳೆ ಸುತ್ತಲೂ ಅರಣ್ಯ ಇಲಾಖೆ ಸಿಬ್ಬಂದಿ ಬಲೆಯನ್ನು ಕಟ್ಟಿದರು. ನಂತರ ಸಮೀಪ ಪಟಾಕಿ ಸಿಡಿಸಿದರು. ಆದರೂ ಕರಡಿ ಪತ್ತೆಯಾಗಲಿಲ್ಲ. ನಂತರ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಬೆಂಕಿಯ ಪಂಜುಗಳನ್ನು ಹಿಡಿದುಕೊಂಡು, ತಲೆಗೆ ಹೆಲ್ಮೆಟ್ ಹಾಕಿಕೊಂಡು ಪಟಾಕಿ ಸಿಡಿಸುತ್ತ ಕೂಗುತ್ತಾ ಮೆಕ್ಕೆಜೋಳ ಬೆಳೆಯ ಮಧ್ಯ ಕಾರ್ಯಾಚರಣೆ ನಡೆಸಿದರು. ಆದರೂ ಕರಡಿ ಪತ್ತೆಯಾಗಲಿಲ್ಲ.