<p><strong>ಶಿವಮೊಗ್ಗ:</strong> ‘ಇಂದಿನ ದುರಿತ ಕಾಲದಲ್ಲಿ, ಆತಂಕ, ಹತಾಶೆಯ ಈ ಕಾಲಘಟ್ಟದಲ್ಲಿ ಏನಾದರೂ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ರೂಪದಲ್ಲಿ ಕವಿ ಸತ್ಯನಾರಾಯಣರಾವ್ ಅಣತಿ ಕಾವ್ಯ ತೋರುತ್ತದೆ’ ಎಂದು ಪ್ರಾಧ್ಯಾಪಕಿ ಪ್ರೊ. ಭಾರತಿದೇವಿ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭಾನುವಾರ ನಡೆದ ಕವಿ, ನಾಟಕಕಾರ ಸತ್ಯನಾರಾಯಣರಾವ್ ಅಣತಿ ಅವರ ಸಮಗ್ರ ಕಾವ್ಯ ‘ಮೌನ ಮಿಗಿಲು’ ಹಾಗೂ ಹೊಸ ನಾಟಕ ‘ನೀಲಾಂಜನೆ ಮಣಿಮೇಖಲೈ’ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಬರವಣಿಗೆ ಮೂಲಕ ಅಭಿವ್ಯಕ್ತಿ ಮಾಡುವ ಜೊತೆಗೆ ನಿರುಪಾಯರಾಗುವ ಈ ಹೊತ್ತಿನಲ್ಲಿ ಅಣತಿ ಅವರ ಕಾವ್ಯ ದಾರಿ ತೋರಿಸಿಕೊಡುತ್ತದೆ. ಪ್ರೊ.ರಾಜೇಂದ್ರ ಚೆನ್ನಿ ಅವರ ಮಾತಿನಂತೆ ಎಲ್ಲ ಕೆಡುಕುಗಳಾಚೆ ಪ್ರೀತಿಯ ಆಪ್ತ ಜಗತ್ತಿನ ಹುಡುಕಾಟಕ್ಕೆ ಸತ್ವವನ್ನು ಈ ಕಾವ್ಯ ತೋರುತ್ತದೆ. ಬದುಕಿಗೆ ಕಾರಣ ಕಂಡುಕೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.</p>.<p>ಸ್ವಾತಂತ್ರ್ಯೋತ್ತರ ಭಾರತದ ವಿದ್ಯಮಾನಗಳನ್ನು ಅವರ ಬರಹದಲ್ಲಿ ಹಿಡಿದಿಟ್ಟಿದ್ದಾರೆ. ಜಾಗತಿಕವಾದ ಸಂಗತಿಗಳನ್ನು ಸ್ಥಳೀಯವಾದ ವಿಚಾರಗಳೊಟ್ಟಿಗೆ ಜೋಡಿಸುವುದು ಅವರ ಬರವಣಿಗೆಯ ವಿಶೇಷ. ಕನ್ನಡ ಸಾಹಿತ್ಯದ ವಿವಿಧ ಕಾಲಘಟ್ಟದ ಶ್ರೇಷ್ಠ ಬರವಣಿಗೆಯಲ್ಲಿ ಸಮಕಾಲೀನರೊಂದಿಗೆ ಅಣತಿ ಅವರಿಗೂ ಆ ಶ್ರೇಯ ದಕ್ಕುತ್ತದೆ ಎಂದರು.</p>.<p>ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು.</p>.<p>ಧಾರವಾಡದ ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ, ಕಾರ್ಕಳ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ್, ಪ್ರಕಾಶಕ ಬಿ.ಎಸ್. ವಿದ್ಯಾರಣ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ‘ಇಂದಿನ ದುರಿತ ಕಾಲದಲ್ಲಿ, ಆತಂಕ, ಹತಾಶೆಯ ಈ ಕಾಲಘಟ್ಟದಲ್ಲಿ ಏನಾದರೂ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ರೂಪದಲ್ಲಿ ಕವಿ ಸತ್ಯನಾರಾಯಣರಾವ್ ಅಣತಿ ಕಾವ್ಯ ತೋರುತ್ತದೆ’ ಎಂದು ಪ್ರಾಧ್ಯಾಪಕಿ ಪ್ರೊ. ಭಾರತಿದೇವಿ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭಾನುವಾರ ನಡೆದ ಕವಿ, ನಾಟಕಕಾರ ಸತ್ಯನಾರಾಯಣರಾವ್ ಅಣತಿ ಅವರ ಸಮಗ್ರ ಕಾವ್ಯ ‘ಮೌನ ಮಿಗಿಲು’ ಹಾಗೂ ಹೊಸ ನಾಟಕ ‘ನೀಲಾಂಜನೆ ಮಣಿಮೇಖಲೈ’ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಬರವಣಿಗೆ ಮೂಲಕ ಅಭಿವ್ಯಕ್ತಿ ಮಾಡುವ ಜೊತೆಗೆ ನಿರುಪಾಯರಾಗುವ ಈ ಹೊತ್ತಿನಲ್ಲಿ ಅಣತಿ ಅವರ ಕಾವ್ಯ ದಾರಿ ತೋರಿಸಿಕೊಡುತ್ತದೆ. ಪ್ರೊ.ರಾಜೇಂದ್ರ ಚೆನ್ನಿ ಅವರ ಮಾತಿನಂತೆ ಎಲ್ಲ ಕೆಡುಕುಗಳಾಚೆ ಪ್ರೀತಿಯ ಆಪ್ತ ಜಗತ್ತಿನ ಹುಡುಕಾಟಕ್ಕೆ ಸತ್ವವನ್ನು ಈ ಕಾವ್ಯ ತೋರುತ್ತದೆ. ಬದುಕಿಗೆ ಕಾರಣ ಕಂಡುಕೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.</p>.<p>ಸ್ವಾತಂತ್ರ್ಯೋತ್ತರ ಭಾರತದ ವಿದ್ಯಮಾನಗಳನ್ನು ಅವರ ಬರಹದಲ್ಲಿ ಹಿಡಿದಿಟ್ಟಿದ್ದಾರೆ. ಜಾಗತಿಕವಾದ ಸಂಗತಿಗಳನ್ನು ಸ್ಥಳೀಯವಾದ ವಿಚಾರಗಳೊಟ್ಟಿಗೆ ಜೋಡಿಸುವುದು ಅವರ ಬರವಣಿಗೆಯ ವಿಶೇಷ. ಕನ್ನಡ ಸಾಹಿತ್ಯದ ವಿವಿಧ ಕಾಲಘಟ್ಟದ ಶ್ರೇಷ್ಠ ಬರವಣಿಗೆಯಲ್ಲಿ ಸಮಕಾಲೀನರೊಂದಿಗೆ ಅಣತಿ ಅವರಿಗೂ ಆ ಶ್ರೇಯ ದಕ್ಕುತ್ತದೆ ಎಂದರು.</p>.<p>ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು.</p>.<p>ಧಾರವಾಡದ ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ, ಕಾರ್ಕಳ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ್, ಪ್ರಕಾಶಕ ಬಿ.ಎಸ್. ವಿದ್ಯಾರಣ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>