<p><strong>ಹೊಸನಗರ:</strong> ರಾಮಾಯಣದ ಮೌಲ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ರಾಘವೇಶ್ವರ ಭಾರತಿ ಶ್ರೀಗಳು ಭಾವರಾಮಾಯಣ ಕೃತಿ ರಚಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹನಿಯ ರವಿ ಹೇಳಿದರು. </p>.<p>ರಾಮಚಂದ್ರಾಪುರ ಮಠದಲ್ಲಿ ನಡೆದ ರಾಘವೇಶ್ವರ ಭಾರತಿ ಶ್ರೀ ರಚಿಸಿದ ಭಾವರಾಮಾಯಣ ರಾಮಾವತರಣ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಸಮಾಜಕ್ಕೆ ಒಳ್ಳೆಯ ವಿಷಯ ತಲುಪಿಸುವುದು ಕೃತಿಯ ಉದ್ದೇಶ. ವಾಲ್ಮೀಕಿ ರಾಮಾಯಣದ ಆಧಾರದಲ್ಲಿ ಶ್ರೀಗಳಿಂದ ರಚಿತವಾದ ಕೃತಿ ಅತ್ಯಂತ ಸರಳವಾಗಿ ಮೂಡಿಬಂದಿದೆ’ ಎಂದು ಹೇಳಿದರು. </p>.<p>ರಾಮಾಯಣದ ಪುಸ್ತಕ ಪ್ರತಿ ಮನೆಯಲ್ಲೂ ಇರಬೇಕು, ಮುಂದಿನ ದಿನಗಳಲ್ಲಿ ಎಲ್ಲಾ ಭಾಷೆಗಳಲ್ಲೂ ಲಭ್ಯವಾಗಬೇಕು ಎಂದು ರಾಮಚಂದ್ರಾಪುರ ಮಂಡಲ ದಿಗ್ದರ್ಷಕರಾದ ಭಾಗಿ ಸತ್ಯನಾರಾಯಣ ಹೇಳಿದರು.</p>.<p>ಪ್ರಧಾನ ಮಠದ ನಿರ್ವಹಣಾ ಸಮಿತಿ ಅಧ್ಯಕ್ಷ ಸೀತಾರಾಮ್ ಭಟ್, ಉದ್ಯಮಿ ಪ್ರಭಾಕರ ರಾವ್ ಕಾರ್ಗಡಿ, ಪತ್ರಕರ್ತ ವಸಂತ ನೀಚಡಿ, ಮಂಡಲ ಅಧ್ಯಕ್ಷ ಬೇರಾಳ ಪ್ರಕಾಶ್, ಕಾರ್ಯದರ್ಶಿ ಕೆ.ಎಲ್. ರಮೇಶ್ ಕಾನುಗೋಡು ಇನ್ನಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸನಗರ:</strong> ರಾಮಾಯಣದ ಮೌಲ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ರಾಘವೇಶ್ವರ ಭಾರತಿ ಶ್ರೀಗಳು ಭಾವರಾಮಾಯಣ ಕೃತಿ ರಚಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹನಿಯ ರವಿ ಹೇಳಿದರು. </p>.<p>ರಾಮಚಂದ್ರಾಪುರ ಮಠದಲ್ಲಿ ನಡೆದ ರಾಘವೇಶ್ವರ ಭಾರತಿ ಶ್ರೀ ರಚಿಸಿದ ಭಾವರಾಮಾಯಣ ರಾಮಾವತರಣ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಸಮಾಜಕ್ಕೆ ಒಳ್ಳೆಯ ವಿಷಯ ತಲುಪಿಸುವುದು ಕೃತಿಯ ಉದ್ದೇಶ. ವಾಲ್ಮೀಕಿ ರಾಮಾಯಣದ ಆಧಾರದಲ್ಲಿ ಶ್ರೀಗಳಿಂದ ರಚಿತವಾದ ಕೃತಿ ಅತ್ಯಂತ ಸರಳವಾಗಿ ಮೂಡಿಬಂದಿದೆ’ ಎಂದು ಹೇಳಿದರು. </p>.<p>ರಾಮಾಯಣದ ಪುಸ್ತಕ ಪ್ರತಿ ಮನೆಯಲ್ಲೂ ಇರಬೇಕು, ಮುಂದಿನ ದಿನಗಳಲ್ಲಿ ಎಲ್ಲಾ ಭಾಷೆಗಳಲ್ಲೂ ಲಭ್ಯವಾಗಬೇಕು ಎಂದು ರಾಮಚಂದ್ರಾಪುರ ಮಂಡಲ ದಿಗ್ದರ್ಷಕರಾದ ಭಾಗಿ ಸತ್ಯನಾರಾಯಣ ಹೇಳಿದರು.</p>.<p>ಪ್ರಧಾನ ಮಠದ ನಿರ್ವಹಣಾ ಸಮಿತಿ ಅಧ್ಯಕ್ಷ ಸೀತಾರಾಮ್ ಭಟ್, ಉದ್ಯಮಿ ಪ್ರಭಾಕರ ರಾವ್ ಕಾರ್ಗಡಿ, ಪತ್ರಕರ್ತ ವಸಂತ ನೀಚಡಿ, ಮಂಡಲ ಅಧ್ಯಕ್ಷ ಬೇರಾಳ ಪ್ರಕಾಶ್, ಕಾರ್ಯದರ್ಶಿ ಕೆ.ಎಲ್. ರಮೇಶ್ ಕಾನುಗೋಡು ಇನ್ನಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>