'ಗೆಲಿಲಿಯೋ ಭೂಮಿ ದುಂಡಾಗಿದೆ. ಸೂರ್ಯನ ಸುತ್ತ ಭೂಮಿ ತಿರುಗುತ್ತೆ ಎಂದು ಹೇಳಿದಾಗ. ಆಗಿನ ಜಗತ್ತು ಒಪ್ಪಲಿಲ್ಲ. ಜನರ ನಂಬಿಕೆಯನ್ನು ಮುರಿದಾಗ ಆತ ಸಂಕಷ್ಟಗಳನ್ನು ಎದುರಿಸಿ ಜರ್ಝರಿತನಾಗಿದ್ದ. ಹೀಗಾಗಿ ಭೂಮಿಯೇ ತಟಸ್ಥ, ಸೂರ್ಯನೇ ಅದರ ಸುತ್ತ ತಿರುಗೋದು ಎಂದು ರಾಜನ ಮುಂದೆ ತನ್ನ ಹೇಳಿಕೆ ಬದಲಿಸಿದ್ದ. ಅರಮನೆಯ ದ್ವಾರದ ಬಳಿ ನಿಂತವನೊಬ್ಬ ಗೆಲಿಲಿಯೋಗೆ 'ಕೊನೆಗೂ ಅವರು (ರಾಜ) ಹೇಳಿದ್ದನ್ನೇ ಒಪ್ಪಿಕೊಂಡ್ಯಲ್ಲಾ' ಎಂದು ಕೇಳ್ತಾನೆ. ಅದಕ್ಕೆ ಗೆಲಿಲಿಯೋ, ನಾನು ಒಪ್ಪಿಕೊಂಡ ಕೂಡಲೇ ಜಗದ ನಿಯಮ ಬದಲಾಗೊಲ್ಲ. ಅದು ಹಾಗೆ ಇರುತ್ತದೆ. ಇವರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಅವರ ವಾದ ಒಪ್ಪಬೇಕಾಯಿತು ಎಂದು ಉತ್ತರಿಸುತ್ತಾನೆ. ಹಾಗೆಯೇ ಪಠ್ಯ ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಾಠ ತೆಗೆಯುವುದರಿಂದ ಸತ್ಯ ಬದಲಿಸಲು ಆಗೊಲ್ಲ’ ಎಂದು ಮಾರ್ಮಿಕವಾಗಿ ನುಡಿದರು.