‘12ನೇ ಶತಮಾನದಲ್ಲಿ ಬಸವಣ್ಣ ಪರಿಶಿಷ್ಟ ವರ್ಗದವರು, ಹಿಂದುಳಿದವರ ಬಗ್ಗೆ ಸಾಮಾಜಿಕ ಕಾಳಜಿ ಹೊಂದಿ ಜಾತಿ ವಿನಾಶಕ್ಕಾಗಿ ಪ್ರಭುತ್ವದ ವಿರುದ್ಧ ಹೋರಾಡಿದರು. ನಾಡಿನ ಬಹುತೇಕ ಸ್ವಾಮೀಜಿಗಳು ಬಸವಣ್ಣನ ಚಿಂತನೆಗಳನ್ನು ಒಪ್ಪಿಕೊಂಡು ಸಮಾಜದಲ್ಲಿ ಎಲ್ಲ ವರ್ಗದ ಹಿತವನ್ನು ಕಾಪಾಡುವ ಬದಲು ತಮಗಿರುವ ಘನತೆ, ಗೌರವ ಮರೆತು ಯಡಿಯೂರಪ್ಪ ಅವರು ಜೈಲಿನಿಂದ ಹೊರ ಬಂದಾಗಲೂ ಸ್ವಾಮೀಜಿಗಳು ಸಂಭ್ರಮಪಟ್ಟಿದ್ದನ್ನು ಜನರು ಮರೆತಿಲ್ಲ. ಈಗ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬಂದಿರುವುದನ್ನು ಮನಗಂಡು ಒಂದೇ ಸಮುದಾಯದ ಸ್ವಾಮೀಜಿಗಳು ಬಹಿರಂಗವಾಗಿ ಬಿಜೆಪಿ ಹೈಕಮಾಂಡ್ಗೆ ಒತ್ತಡ ಹೇರುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಕಿಡಿಕಾರಿದ್ದಾರೆ.