ಜುಲೈ 23, 24ರಂದು ಸುರಿದ ಭಾರಿ ಮಳೆಗೆ ಧರೆ ಕುಸಿದಿತ್ತು. ಈಗ ಪ್ರತಿದಿನ ಸ್ವಲ್ಪ ಸ್ವಲ್ಪವೇ ಕುಸಿಯುತ್ತಿದ್ದು, ಒಂದೆರಡು ಅಡಿ ಕುಸಿದರೆ ತೀರ್ಥಹಳ್ಳಿ–ಕೋಣಂದೂರು ಸಂಪರ್ಕದ ಮಾರ್ಗದಲ್ಲಿನ ಕೊಪ್ಪಲು, ಹೊದಲ ಅರಳಾಪುರ, ವಡ್ಡಿನಬೈಲು, ತುಪ್ಪದ ಮನೆ ಮತ್ತಿತರ ಗ್ರಾಮಗಳಿಗೆ ಸಂಪರ್ಕ ಕಡಿತಗೊಳ್ಳಲಿದೆ. ಕುಸಿತದ ಅಪಾಯದ ಮಧ್ಯೆಯೂ ಭಾರ ತುಂಬಿದ ವಾಹನಗಳು ಸಂಚರಿಸುತ್ತಿವೆ.