ಮೀನು, ಕಪ್ಪೆ ಹಾಗೂ ಇನ್ನಿತರ ಜೀವಿಗಳು ನದಿಯ ದಂಡೆಯ ಮೇಲೆ ಸತ್ತು ಬಿದ್ದಿವೆ. ಆಹಾರ ಅರಸಿ ಬರುವ ಪಕ್ಷಿ ಸಂಕುಲಗಳು ಸಹ ಸತ್ತ ಪ್ರಾಣಿ ತಿಂದು ಸಾವನ್ನಪ್ಪುವ ಸಾಧ್ಯತೆ ಇದೆ. ಸುತ್ತಲಿನ ಜಾನುವಾರುಗಳು ಈ ನೀರನ್ನು ಕುಡಿದು ಅಸ್ವಸ್ಥಗೊಂಡಿವೆ. ಸುತ್ತಲಿನ ಪರಿಸರ ದುರ್ವಾಸನೆ ಬೀರುತ್ತಿದೆ ಎಂದು ಸ್ಥಳೀಯರಾದ ದಿನೇಶ್ ಭಂಡಾರಿ ಹೇಳಿದರು.