<p><strong>ಶಿವಮೊಗ್ಗ:</strong> ಜಿಲ್ಲೆಯ ವಿವಿಧೆಡೆ ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಈ ಬಾರಿಯ ಬಜೆಟ್ನಲ್ಲಿಘೋಷಣೆಯಾಗುವನಿರೀಕ್ಷೆಯಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.</p>.<p>ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಲವು ನೀರಾವರಿ ಯೋಜನೆಗಳು ಜಾರಿಯಾಗಬೇಕಿವೆ. ಕೆಲವು ಅರ್ಧಕ್ಕೆ ನಿಂತಿವೆ. ಕೆಲವಕ್ಕೆ ಆಡಳಿತಾತ್ಮಕ ಅನುಮೋದನೆ ಸಿಗಬೇಕಿದೆ. ಈ ಎಲ್ಲಾ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಬಜೆಟ್ನಲ್ಲಿ ಘೋಷಣೆ ಮಾಡಿ ಹಣ ಬಿಡುಗಡೆ ಮಾಡಬೇಕು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.</p>.<p>ಈ ಸಂಬಂಧಜಿಲ್ಲೆಯ ನೀರಾವರಿಯೋಜನೆಗಳಿಗೆ ಅನುಮತಿ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಬಿಜೆಪಿ ಶಾಸಕರು, ಸಂಸದರು ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ಗೆ ಈಚೆಗೆ ಮನವಿ ಮಾಡಲಾಗಿದ್ದು. ಈ ಎಲ್ಲಾ ಯೋಜನೆಗಳಿಗೆ ಸರ್ಕಾರದ ಬಜೆಟ್ನಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p>ಸೊರಬ ತಾಲ್ಲೂಕಿನಲ್ಲಿ ವರದಾ ನದಿಯಿಂದ ಮೂಗೂರು ಏತ ನೀರಾವರಿಗೆ 0.359 ಟಿಎಂಸಿ ನೀರು ಬೇಕಾಗಲಿದ್ದು, ಇದಕ್ಕಾಗಿ ₹ 105 ಕೋಟಿ ವೆಚ್ಚದ ಯೋಜನಾ ವರದಿ ತಯಾರಿಸಲಾಗಿದೆ. ಅಲ್ಲದೇ ಮೂಡಿ ಏತ ನೀರಾವರಿಗೆ 1.09 ಟಿಎಂಸಿ ನೀರು ಬೇಕಾಗಲಿದ್ದು, ಇದು ₹ 185 ಕೋಟಿ ವೆಚ್ಚದ ಯೋಜನಾ ವರದಿಯಾಗಿದೆ ಎಂದರು.</p>.<p>ಶಿಕಾರಿಪುರದ ಹಿರೇಕೆರೂರು ತಾಲ್ಲೂಕಿನ ಪುರದ ಕೆರೆಯಿಂದ 200 ಕೆರೆಗಳಿಗೆ ನೀರು ತುಂಬಿಸುವುದಕ್ಕೆ 1.05 ಟಿಎಂಸಿ ನೀರು ಬೇಕಾಗುತ್ತದೆ. ಸುಮಾರು ₹ 885 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಹಾಗೆಯೇ ಶಿವಮೊಗ್ಗ ಗ್ರಾಮಾಂತರ ಭಾಗದ 75 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 0.35 ಟಿಎಂಸಿ ನೀರು ಮತ್ತು ಶಿಕಾರಿಪುರ, ಶಿರಾಳಕೊಪ್ಪ ಭಾಗಕ್ಕೆ ಕುಡಿಯುವ ನೀರು ಒದಗಿಸಲು 0.4 ಟಿಎಂಸಿ ನೀರು ಬೇಕಾಗುತ್ತದೆ. ₹ 300 ಕೋಟಿಯ ಯೋಜನೆ ಇದು ಎಂದು ಮಾಹಿತಿ ನೀಡಿದರು.</p>.<p>ಈ ಹಿಂದೆ ಶಿಕಾರಿಪುರ ಕಲ್ಲೊಡ್ಲು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ಆಗ ಅದು ₹ 20 ಕೋಟಿ ಯೋಜನೆಯಾಗಿತ್ತು. ಅದರೆ ಅದು ಇಂದಿಗೂ ಜಾರಿಯಾಗಿಲ್ಲ. ಈಗ ಅದಕ್ಕೆ ₹ 100 ಕೋಟಿ ಬೇಕಾಗುತ್ತದೆ. 0.6 ಟಿಎಂಸಿ ನೀರಿನಲ್ಲಿ 5 ಸಾವಿರ ಎಕರೆಗೆ ಇದರಿಂದ ನೀರುಣಿಸಬಹುದಾಗಿದೆ ಎಂದು ತಿಳಿಸಿದರು.</p>.<p>ಸರ್ಕಾರ ದಂಡಾವತಿ ಯೋಜನೆಗೆ ಮರುಜೀವ ನೀಡಬೇಕಾಗಿದೆ. ಇದಲ್ಲದೇ ಬೈಂದೂರಿನ ಸಿದ್ದಾಪುರದಲ್ಲಿ ವರಹಾ ನದಿಯಿಂದ ಏತ ನೀರಾವರಿ ಯೋಜನೆಗೆ ಬಜೆಟ್ನಲ್ಲಿ ಘೋಷಣೆ ಮಾಡಬೇಕು.ಹೊಳಲೂರು, ಕಾಚಿನಕಟ್ಟೆ, ಕ್ಯಾತನಹೊಸೂರು, ಗುಡ್ಡದ ತಿಮ್ಮಿನಕಟ್ಟೆ, ಗುಡ್ಡದ ಕೆರೆ ಹೀಗೆ 5 ಸಣ್ಣ ನೀರಾವರಿ ಯೋಜನೆಗಳು ಇದ್ದು, ಇವೆಲ್ಲಕ್ಕೂ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದೆ. ಹಲವು ಕಾರಣಗಳಿಂದ ಇವು ಜಾರಿಯಾಗಿಲ್ಲ. ಇವುಗಳನ್ನು ಕೂಡ ಜಾರಿ ಮಾಡಬೇಕು ಎಂದರು.</p>.<p>ಪ್ರಮುಖರಾದ ಪವಿತ್ರಾ ರಾಮಯ್ಯ, ಎಚ್.ಸಿ. ಬಸವರಾಜಪ್ಪ, ನಾಗರತ್ನ ದೇವರಾಜ್, ಎಸ್. ದತ್ತಾತ್ರಿ, ಬುಳ್ಳಾಪುರ ಬಸವರಾಜಪ್ಪ, ಗಂಗಾಧರ್, ಬಿ.ಕೆ. ಶ್ರೀನಾಥ್, ಯೋಗೀಶ್ ಗೌಡ, ಮಧುಸೂದನ್, ಕೆ.ವಿ. ಅಣ್ಣಪ್ಪ, ರತ್ನಾಕರ ಶೆಣೈ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಜಿಲ್ಲೆಯ ವಿವಿಧೆಡೆ ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಈ ಬಾರಿಯ ಬಜೆಟ್ನಲ್ಲಿಘೋಷಣೆಯಾಗುವನಿರೀಕ್ಷೆಯಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.</p>.<p>ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಲವು ನೀರಾವರಿ ಯೋಜನೆಗಳು ಜಾರಿಯಾಗಬೇಕಿವೆ. ಕೆಲವು ಅರ್ಧಕ್ಕೆ ನಿಂತಿವೆ. ಕೆಲವಕ್ಕೆ ಆಡಳಿತಾತ್ಮಕ ಅನುಮೋದನೆ ಸಿಗಬೇಕಿದೆ. ಈ ಎಲ್ಲಾ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಬಜೆಟ್ನಲ್ಲಿ ಘೋಷಣೆ ಮಾಡಿ ಹಣ ಬಿಡುಗಡೆ ಮಾಡಬೇಕು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.</p>.<p>ಈ ಸಂಬಂಧಜಿಲ್ಲೆಯ ನೀರಾವರಿಯೋಜನೆಗಳಿಗೆ ಅನುಮತಿ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಬಿಜೆಪಿ ಶಾಸಕರು, ಸಂಸದರು ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ಗೆ ಈಚೆಗೆ ಮನವಿ ಮಾಡಲಾಗಿದ್ದು. ಈ ಎಲ್ಲಾ ಯೋಜನೆಗಳಿಗೆ ಸರ್ಕಾರದ ಬಜೆಟ್ನಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p>ಸೊರಬ ತಾಲ್ಲೂಕಿನಲ್ಲಿ ವರದಾ ನದಿಯಿಂದ ಮೂಗೂರು ಏತ ನೀರಾವರಿಗೆ 0.359 ಟಿಎಂಸಿ ನೀರು ಬೇಕಾಗಲಿದ್ದು, ಇದಕ್ಕಾಗಿ ₹ 105 ಕೋಟಿ ವೆಚ್ಚದ ಯೋಜನಾ ವರದಿ ತಯಾರಿಸಲಾಗಿದೆ. ಅಲ್ಲದೇ ಮೂಡಿ ಏತ ನೀರಾವರಿಗೆ 1.09 ಟಿಎಂಸಿ ನೀರು ಬೇಕಾಗಲಿದ್ದು, ಇದು ₹ 185 ಕೋಟಿ ವೆಚ್ಚದ ಯೋಜನಾ ವರದಿಯಾಗಿದೆ ಎಂದರು.</p>.<p>ಶಿಕಾರಿಪುರದ ಹಿರೇಕೆರೂರು ತಾಲ್ಲೂಕಿನ ಪುರದ ಕೆರೆಯಿಂದ 200 ಕೆರೆಗಳಿಗೆ ನೀರು ತುಂಬಿಸುವುದಕ್ಕೆ 1.05 ಟಿಎಂಸಿ ನೀರು ಬೇಕಾಗುತ್ತದೆ. ಸುಮಾರು ₹ 885 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಹಾಗೆಯೇ ಶಿವಮೊಗ್ಗ ಗ್ರಾಮಾಂತರ ಭಾಗದ 75 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 0.35 ಟಿಎಂಸಿ ನೀರು ಮತ್ತು ಶಿಕಾರಿಪುರ, ಶಿರಾಳಕೊಪ್ಪ ಭಾಗಕ್ಕೆ ಕುಡಿಯುವ ನೀರು ಒದಗಿಸಲು 0.4 ಟಿಎಂಸಿ ನೀರು ಬೇಕಾಗುತ್ತದೆ. ₹ 300 ಕೋಟಿಯ ಯೋಜನೆ ಇದು ಎಂದು ಮಾಹಿತಿ ನೀಡಿದರು.</p>.<p>ಈ ಹಿಂದೆ ಶಿಕಾರಿಪುರ ಕಲ್ಲೊಡ್ಲು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ಆಗ ಅದು ₹ 20 ಕೋಟಿ ಯೋಜನೆಯಾಗಿತ್ತು. ಅದರೆ ಅದು ಇಂದಿಗೂ ಜಾರಿಯಾಗಿಲ್ಲ. ಈಗ ಅದಕ್ಕೆ ₹ 100 ಕೋಟಿ ಬೇಕಾಗುತ್ತದೆ. 0.6 ಟಿಎಂಸಿ ನೀರಿನಲ್ಲಿ 5 ಸಾವಿರ ಎಕರೆಗೆ ಇದರಿಂದ ನೀರುಣಿಸಬಹುದಾಗಿದೆ ಎಂದು ತಿಳಿಸಿದರು.</p>.<p>ಸರ್ಕಾರ ದಂಡಾವತಿ ಯೋಜನೆಗೆ ಮರುಜೀವ ನೀಡಬೇಕಾಗಿದೆ. ಇದಲ್ಲದೇ ಬೈಂದೂರಿನ ಸಿದ್ದಾಪುರದಲ್ಲಿ ವರಹಾ ನದಿಯಿಂದ ಏತ ನೀರಾವರಿ ಯೋಜನೆಗೆ ಬಜೆಟ್ನಲ್ಲಿ ಘೋಷಣೆ ಮಾಡಬೇಕು.ಹೊಳಲೂರು, ಕಾಚಿನಕಟ್ಟೆ, ಕ್ಯಾತನಹೊಸೂರು, ಗುಡ್ಡದ ತಿಮ್ಮಿನಕಟ್ಟೆ, ಗುಡ್ಡದ ಕೆರೆ ಹೀಗೆ 5 ಸಣ್ಣ ನೀರಾವರಿ ಯೋಜನೆಗಳು ಇದ್ದು, ಇವೆಲ್ಲಕ್ಕೂ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದೆ. ಹಲವು ಕಾರಣಗಳಿಂದ ಇವು ಜಾರಿಯಾಗಿಲ್ಲ. ಇವುಗಳನ್ನು ಕೂಡ ಜಾರಿ ಮಾಡಬೇಕು ಎಂದರು.</p>.<p>ಪ್ರಮುಖರಾದ ಪವಿತ್ರಾ ರಾಮಯ್ಯ, ಎಚ್.ಸಿ. ಬಸವರಾಜಪ್ಪ, ನಾಗರತ್ನ ದೇವರಾಜ್, ಎಸ್. ದತ್ತಾತ್ರಿ, ಬುಳ್ಳಾಪುರ ಬಸವರಾಜಪ್ಪ, ಗಂಗಾಧರ್, ಬಿ.ಕೆ. ಶ್ರೀನಾಥ್, ಯೋಗೀಶ್ ಗೌಡ, ಮಧುಸೂದನ್, ಕೆ.ವಿ. ಅಣ್ಣಪ್ಪ, ರತ್ನಾಕರ ಶೆಣೈ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>