ಈಶ್ವರಪ್ಪ ನೇತೃತ್ವದಲ್ಲಿ ನಿಯೋಗದಲ್ಲಿ ತೆರಳಿ ನಿರಾಣಿ ಅವರನ್ನು ಭೇಟಿಮಾಡಿದ ಕಲ್ಲು ಗಣಿಗಳ ಮಾಲೀಕರು, ಹುಣಸೋಡು ಸ್ಫೋಟದ ಬಳಿಕ ಎಲ್ಲ ಕಲ್ಲು ಗಣಿಗಳನ್ನೂ ಸ್ಥಗಿತಗೊಳಿಸಿ ರುವುದರಿಂದ ಉಂಟಾಗಿರುವ ಸಮಸ್ಯೆಯನ್ನು ವಿವರಿಸಿದರು. ಜಿಲ್ಲೆಯಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಿಗೆ ಕಲ್ಲು, ಜೆಲ್ಲಿಯ ಕೊರತೆ ಉಂಟಾಗಿದ್ದು, ಕಲ್ಲು ಗಣಿಗಳ ಮಾಲೀಕರಿಗೂ ಆರ್ಥಿಕ ನಷ್ಟವಾಗುತ್ತಿದೆ. ಈ ಅಂಶಗಳನ್ನು ಪರಿಶೀಲಿಸಿಪರವಾನಗಿಯ ಷರತ್ತುಗಳನ್ನು ಪಾಲಿಸಿ, ನಡೆಯುತ್ತಿದ್ದ ಎಲ್ಲ ಕಲ್ಲು ಗಣಿಗಳ ಪುನರಾರಂಭಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.