ಸರ್ಕಾರದ ನಿಯಮಗಳಿಂದ ನಾಟಕ ಪ್ರದರ್ಶನಗಳು ವರ್ಷಪೂರ್ತಿ ಸ್ಥಗಿತವಾಗಿದ್ದವು. ಒಂದು ತಿಂಗಳಿನಿಂದ ನಿಧಾನವಾಗಿ ನಾಟಕಗಳ ಪ್ರದರ್ಶನ ಆರಂಭಿಸಲಾಗಿತ್ತು. ಚೇತರಿಸಿಕೊಳ್ಳುವ ಮುನ್ನವೇ ಕೊರೊನಾ ಎರಡನೇ ಅಲೆ ಮತ್ತೆ ಆವರಿಸುತ್ತಿದೆ. ಕಲಾವಿದರ ಬದುಕನ್ನು ಆತಂಕಕ್ಕೆ ದೂಡಿದೆ.
ಕಲೆಯೇ ಜೀವನ ಎಂಬ ಧ್ಯೇಯವಾಕ್ಯದೊಂದಿಗೆ ರಂಗಭೂಮಿ ಯನ್ನು ಉಳಿಸುವ, ಬೆಳೆಸುವ ಕಾಯಕ ನಂಬಿ ಜನರಿಗೆ ಮನೋರಂಜನೆ, ಸಮಾಜಿಕ ಅರಿವು ಮೂಡಿಸುತ್ತಿದ್ದ ಕಲಾವಿದರ ಬದುಕು ಕತ್ತಲೆ ಕೂಪದತ್ತ ಸಾಗಿದೆ.