ಬೇಲೂರು ರಘುನಂದನ್ ರಚನೆಯ ‘ಹತ್ಯಾಕಾಂಡ’ ನಾಟಕಕ್ಕೆ ಪ್ರಸನ್ನ ವೈದ್ಯ ಮತ್ತು ರಾಘವೇಂದ್ರ ಪ್ರಭು ಸಂಗೀತ ನಿರ್ವಹಣೆ, ವಸ್ತ್ರ ವಿನ್ಯಾಸ ಮಾಡುವರು. ಪ್ರಶಾಂತ್ ಕುಮಾರ್ ಪರಿಕರ ನಿರ್ಮಾಣ, ಶಂಕರ್ ಕೆ. ಬೆಳಲಕಟ್ ಬೆಳಕಿನ ನಿರ್ವಹಣೆ ಮಾಡುವರು. ರಂಜಿತ ವಸ್ತ್ರವಿನ್ಯಾಸಕ್ಕೆ ಸಹಕರಿಸುವರು. ರಂಗಾಯಣ ಕಲಾವಿದರಾದ ಪ್ರಸನ್ನಕುಮಾರ್, ನಿತಿನ್, ರವಿಕುಮಾರ್, ಸುಜಿತ್ ಕಾರ್ಕಳ, ಚಂದನ್, ಶರತ್ ಬಾಬು, ಮಹಾಬಲೇಶ್ವರ್, ಸವಿತಾ ಆರ್. ಕಾಳಿ, ರಂಜಿತ, ದೀಪ್ತಿ, ಕಾರ್ತಿಕ ಕಲ್ಲುಕುಟಿಕರ್ ಅಭಿನಯಿಸುವರು ಎಂದು ವಿವರ ನೀಡಿದರು.