ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಭದ್ರಾವತಿ: ಬಿಸಿಲಿನ ಬಿಸಿ.. ಮೇಲೆ ತಂಪು ಪಾನೀಯ ದರ ಏರಿಕೆ ಬಿಸಿ!

Published : 9 ಮೇ 2024, 8:14 IST
Last Updated : 9 ಮೇ 2024, 8:14 IST
ಫಾಲೋ ಮಾಡಿ
Comments
ಬಿಸಿಲಿನ ತಾಪಕ್ಕೆ ಎಳನೀರು ಸೇವಿಸುತ್ತಿರುವ ಮಹಿಳೆ
ಬಿಸಿಲಿನ ತಾಪಕ್ಕೆ ಎಳನೀರು ಸೇವಿಸುತ್ತಿರುವ ಮಹಿಳೆ
ಮಕ್ಕಳಿಗೆ ಬೇಸಿಗೆ ರಜೆ ಸಮಯ ಬಿಸಿಲಿನ ತಾಪ ಹೆಚ್ಚಿರುವುದರಿಂದ ಹೊರಾಂಗಣದಲ್ಲಿ ಆಟಚಾಡಲು ಸಾಧ್ಯವಿಲ್ಲದೆ ಮನೆಯ ಒಳಗೆ ಟಿ.ವಿ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ನಮ್ಮ ಬಾಲ್ಯದ ಆಟ ನೆನೆದರೆ ಈಗಿನ ಮಕ್ಕಳ ಪರಿಸ್ಥಿತಿ ಶೋಚನೀಯವಾಗಿದೆ.
ಫಿಲೋಮಿನಾ ಪೋಷಕಿ
ಅಭಿವೃದ್ಧಿಯ ಯೋಜನೆ ಅಡಿ ಕಳೆದ ವರ್ಷ ನಗರದ ಹಲವು ಭಾಗದಲ್ಲಿದ್ದ ದೊಡ್ಡ ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕೆಲವು ಭಾಗಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಳೆಯಾದರೆ ಸಸಿಗಳು ಚಿಗುರಿತಾಪಮಾನ ಕಡಿಮೆಯಾಗಬಹುದು.
ದಿನೇಶ್ ಆರ್‌ಎಫ್ಒ
ಎಳನೀರು ದರ ಏರಿಕೆ
ಮಳೆ ಇಲ್ಲದೆ ಬೆಳೆ ಕುಂಠಿತವಾಗಿದೆ. ಅಣಬೆ ಬೇರು ಮತ್ತು ಕಾಂಡದ ಮೇಲೆ ರಸ ಸೋರುವ ರೋಗಗಳು ತೆಂಗಿನ ಬೆಳೆಯನ್ನು ಬಾಧಿಸುತ್ತಿದೆ. ನಗರದ ಸುತ್ತಮುತ್ತಲ ಪ್ರದೇಶದಲ್ಲಿ ಎಳನೀರಿನ ಬೆಳೆ ಕಡಿಮೆಯಾಗಿದ್ದು ಗಾತ್ರದಲ್ಲಿಯೂ ರುಚಿಯಲ್ಲಿಯೂ ವ್ಯತ್ಯಾಸ ಕಂಡುಬರುತ್ತಿದೆ. ಆದ್ದರಿಂದ ದೂರದ ತಮಿಳುನಾಡು ಕೇರಳ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಹೊಸದುರ್ಗ ಇನ್ನಿತರ ಪ್ರದೇಶಗಳಿಂದ ಎಳನೀರು ತರಿಸಲಾಗುತ್ತಿದೆ. ಸರಕು ಸಾಗಣೆ ವೆಚ್ಚ ಗ್ರಾಹಕರ ಮೇಲೆ ಹಾಕಲಾಗುತ್ತಿದೆ. ‘ರೈತರಿಂದ ಒಂದು ಎಳನೀರಿಗೆ ₹ 25ಕ್ಕೆ ಖರೀದಿಸಲಾಗುತ್ತಿದ್ದು ಖರ್ಚು ವೆಚ್ಚಗಳನ್ನು ನೋಡಿ ವ್ಯಾಪಾರಕ್ಕೆ ₹ 50ರಿಂದ ₹ 60 ದರ ನಿಗಿಪಡಿಸಲಾಗುತ್ತಿದೆ. ಬೆಲೆ ಏರಿಕೆಯಾದರೂ ಎಳನೀರು ಕುಡಿಯುವ ಗ್ರಾಹಕರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ’ ಎಂದು ಎಳನೀರು ವ್ಯಾಪಾರಿ ಸುಬ್ರಮಣಿ ತಿಳಿಸಿದರು.
ತಾಪ ಕಡಿಮೆಯಾದ ಬಳಿಕ ಹೊರಬನ್ನಿ
ಬಿಸಿಲಿನಲ್ಲಿ ಹೆಚ್ಚಾಗಿ ತಿರುಗಾಡಬೇಡಿ. ಮನೆಯಿಂದ ಹೊರ ಬಂದರೆ ಕೊಡೆ ಹಿಡಿದು ಸಾಗಿ. ಟೋಪಿ ಧರಿಸಿ. ಕಾಟನ್‌ ಬಟ್ಟೆ ಧರಿಸಿ. ಆದಷ್ಟು ಬಿಸಿಲಿನ ತಾಪ ಕಡಿಮೆಯಾದ ಮೇಲೆ ಹೊರಬನ್ನಿ. ಹೆಚ್ಚಾಗಿ ನೀರನ್ನು ಕುಡಿಯಿರಿ. ಬಿಸಿಲಿನಿಂದ ಬಂದೊಡನೆ ಆಗಾಗ ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ ಇದರಿಂದ ಬಿಸಿಲಿನ ತಾಪದಿಂದ ಉಂಟಾಗುವ ಚರ್ಮರೋಗದಿಂದ ದೂರವಿರಬಹುದು. ಎಂ.ಅಶೋಕ್ ತಾಲ್ಲೂಕು ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT