<p><strong>ಶಿವಮೊಗ್ಗ:</strong> ರಾಜ್ಯದಲ್ಲಿ 55 ಲಕ್ಷ ಜನ ಸಂಖ್ಯೆ ಇರುವ ಈಡಿಗ ಸಮುದಾಯದ ಸಂಘಟನೆಯನ್ನು ಅಘೋಷಿತ ಎಂದು ಉಲ್ಲೇಖಿಸಿರುವ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್,ಶಾಸಕಎಚ್.ಹಾಲಪ್ಪ ಹರತಾಳು ಅವರು ಕ್ಷಮೆಯಾಚಿಸಬೇಕು. ಸಿಗಂದೂರು ದೇವಾಲಯಕ್ಕೆ ರಚಿಸಿರುವ ಮೇಲುಸ್ತುವಾರಿ ಸಮಿತಿ ತಕ್ಷಣ ರದ್ದುಪಡಿಸಬೇಕು ಎಂದು ಮಾಜಿ ಶಾಸಕ ಗೋಪಾಲ ಕೃಷ್ಣ ಬೇಳೂರು ಒತ್ತಾಯಿಸಿದರು.</p>.<p>ನಗರದ ಆರ್ಯ ಈಡಿಗ ಸಮುದಾಯ ಭವನದಲ್ಲಿ ಸೋಮವಾರ ನಡೆದ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಸಮುದಾಯ ಸಂಘಟನೆಯನ್ನ ಅಘೋಷಿತ ಸಂಘಟನೆ ಎಂದು ಜಿಲ್ಲಾಧಿಕಾರಿಗಳು, ಸುಡಗಾಡು ಸಂಘವೆಂದು ಶಾಸಕ ಹಾಲಪ್ಪ ಹರತಾಳು ಹೇಳಿಕೆ ಅಕ್ಷಮ್ಯ. ಕೂಡಲೇ ಇಬ್ಬರೂಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.</p>.<p>ಬ್ರಾಹ್ಮಣ, ಈಡಿಗ ಸಮುದಾಯ ಒಂದಾಗಿ ಸಾಗುತ್ತಿವೆ,ಮುಖ್ಯಮಂತ್ರಿ,ಸಂಸದ, ಎಂಎಡಿಬಿ ಅಧ್ಯಕ್ಷ, ಮತ್ತುಸಾಗರ ಶಾಸಕರ ಕುತಂತ್ರದಿಂದ ಸಮುದಾಯದಲ್ಲಿ ಒಡಕು ಮೂಡಿದೆ.ಹಿಂದುತ್ವಜಪಿಸುವ ಬಿಜೆಪಿ ಹಿಂದುಳಿದ ಸಮಾಜದ ದೇವಾಲಯದ ವಿಷಯದಲ್ಲಿ ಮೂಗು ತೂರಿಸುತ್ತಿದೆ.ಗೋಕರ್ಣದಲ್ಲಿ ಗಲಾಟೆ ನಡೆದಿದೆ. ಉಡುಪಿ ಕೃಷ್ಣ ಮಂದಿರದಲ್ಲಿ ಕನಕನ ಕಿಂಡಿಯ ವಿಚಾರದಲ್ಲಿಹೋರಾಟನಡೆದಿದೆ. ಧರ್ಮಸ್ಥಳದಲ್ಲಿ ಗಲಾಟೆ ನಡೆದಾಗ ಮುಜರಾಯಿ ಇಲಾಖೆಗೆ ಸೇರಿಸಲಿಲ್ಲ. ಈಗಏಕೆ ಇಂತಹ ನಡೆ ಎಂದು ಪ್ರಶ್ನಿಸಿದರು.</p>.<p>ಸಿಗಂದೂರು ಚೌಡೇಶ್ವರಿ ದೇವಾಲಯದ ಸಮಿತಿ ರಚನೆಯ ವಿರುದ್ಧ ಹೋರಾಟ ತೀವ್ರಗೊಳಿಸಬೇಕು. ಶೀಘ್ರ 25 ಸಾವಿರ ಜನರು ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದರು.</p>.<p>ಮನವಿ ಸಲ್ಲಿಕೆ: ಸಭೆಯ ನಂತರಜಿಲ್ಲಾ ಆರ್ಯ ಈಡಿಗ ಸಮಾಜದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿನ ಉಸ್ತುವಾರಿ ಸಮಿತಿ ರದ್ದುಪಡಿಸುವಂತೆ ಒತ್ತಾಯಿಸಿದರು.</p>.<p>ಸಮಾಜದಅಧ್ಯಕ್ಷಹುಲ್ತಿಕೊಪ್ಪ ಶ್ರೀಧರ್, ಎಸ್.ಸಿ.ರಾಮಚಂದ್ರ, ಖಾಜಾಂಚಿ ಡಿ.ದೇವಪ್ಪ, ಮಂಜುನಾಥ್ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ರಾಜ್ಯದಲ್ಲಿ 55 ಲಕ್ಷ ಜನ ಸಂಖ್ಯೆ ಇರುವ ಈಡಿಗ ಸಮುದಾಯದ ಸಂಘಟನೆಯನ್ನು ಅಘೋಷಿತ ಎಂದು ಉಲ್ಲೇಖಿಸಿರುವ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್,ಶಾಸಕಎಚ್.ಹಾಲಪ್ಪ ಹರತಾಳು ಅವರು ಕ್ಷಮೆಯಾಚಿಸಬೇಕು. ಸಿಗಂದೂರು ದೇವಾಲಯಕ್ಕೆ ರಚಿಸಿರುವ ಮೇಲುಸ್ತುವಾರಿ ಸಮಿತಿ ತಕ್ಷಣ ರದ್ದುಪಡಿಸಬೇಕು ಎಂದು ಮಾಜಿ ಶಾಸಕ ಗೋಪಾಲ ಕೃಷ್ಣ ಬೇಳೂರು ಒತ್ತಾಯಿಸಿದರು.</p>.<p>ನಗರದ ಆರ್ಯ ಈಡಿಗ ಸಮುದಾಯ ಭವನದಲ್ಲಿ ಸೋಮವಾರ ನಡೆದ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಸಮುದಾಯ ಸಂಘಟನೆಯನ್ನ ಅಘೋಷಿತ ಸಂಘಟನೆ ಎಂದು ಜಿಲ್ಲಾಧಿಕಾರಿಗಳು, ಸುಡಗಾಡು ಸಂಘವೆಂದು ಶಾಸಕ ಹಾಲಪ್ಪ ಹರತಾಳು ಹೇಳಿಕೆ ಅಕ್ಷಮ್ಯ. ಕೂಡಲೇ ಇಬ್ಬರೂಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.</p>.<p>ಬ್ರಾಹ್ಮಣ, ಈಡಿಗ ಸಮುದಾಯ ಒಂದಾಗಿ ಸಾಗುತ್ತಿವೆ,ಮುಖ್ಯಮಂತ್ರಿ,ಸಂಸದ, ಎಂಎಡಿಬಿ ಅಧ್ಯಕ್ಷ, ಮತ್ತುಸಾಗರ ಶಾಸಕರ ಕುತಂತ್ರದಿಂದ ಸಮುದಾಯದಲ್ಲಿ ಒಡಕು ಮೂಡಿದೆ.ಹಿಂದುತ್ವಜಪಿಸುವ ಬಿಜೆಪಿ ಹಿಂದುಳಿದ ಸಮಾಜದ ದೇವಾಲಯದ ವಿಷಯದಲ್ಲಿ ಮೂಗು ತೂರಿಸುತ್ತಿದೆ.ಗೋಕರ್ಣದಲ್ಲಿ ಗಲಾಟೆ ನಡೆದಿದೆ. ಉಡುಪಿ ಕೃಷ್ಣ ಮಂದಿರದಲ್ಲಿ ಕನಕನ ಕಿಂಡಿಯ ವಿಚಾರದಲ್ಲಿಹೋರಾಟನಡೆದಿದೆ. ಧರ್ಮಸ್ಥಳದಲ್ಲಿ ಗಲಾಟೆ ನಡೆದಾಗ ಮುಜರಾಯಿ ಇಲಾಖೆಗೆ ಸೇರಿಸಲಿಲ್ಲ. ಈಗಏಕೆ ಇಂತಹ ನಡೆ ಎಂದು ಪ್ರಶ್ನಿಸಿದರು.</p>.<p>ಸಿಗಂದೂರು ಚೌಡೇಶ್ವರಿ ದೇವಾಲಯದ ಸಮಿತಿ ರಚನೆಯ ವಿರುದ್ಧ ಹೋರಾಟ ತೀವ್ರಗೊಳಿಸಬೇಕು. ಶೀಘ್ರ 25 ಸಾವಿರ ಜನರು ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದರು.</p>.<p>ಮನವಿ ಸಲ್ಲಿಕೆ: ಸಭೆಯ ನಂತರಜಿಲ್ಲಾ ಆರ್ಯ ಈಡಿಗ ಸಮಾಜದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿನ ಉಸ್ತುವಾರಿ ಸಮಿತಿ ರದ್ದುಪಡಿಸುವಂತೆ ಒತ್ತಾಯಿಸಿದರು.</p>.<p>ಸಮಾಜದಅಧ್ಯಕ್ಷಹುಲ್ತಿಕೊಪ್ಪ ಶ್ರೀಧರ್, ಎಸ್.ಸಿ.ರಾಮಚಂದ್ರ, ಖಾಜಾಂಚಿ ಡಿ.ದೇವಪ್ಪ, ಮಂಜುನಾಥ್ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>