<p><strong>ಶಿವಮೊಗ್ಗ: </strong>ಉಂಬ್ಳೆಬೈಲು ಸುತ್ತಮುತ್ತಲಿನ ಕೃಷಿ ಭೂಮಿಗೆ ನುಗ್ಗಿ ರೈತರ ಫಸಲು ನಾಶ ಮಾಡುತ್ತಿದ್ದ ಕಾಡಾನೆ ಸೆರೆಗೆ ಸಕ್ರೆಬೈಲಿನ ಆನೆಗಳು ಬುಧವಾರ ಕಾರ್ಯಚರಣೆ ನಡೆಸಿದವು.</p>.<p>ಕಾಡಾನೆಗಳುಉಂಬ್ಳೆಬೈಲು ಸುತ್ತಮುತ್ತ ಕಾಡಂಚಿನ ಕೃಷಿ ಭೂಮಿಗೆ ಬಂದು ಬೆಳೆ ನಾಶ ಮಾಡುತ್ತಿವೆ. ಆನೆಗಳನ್ನು ಹಿಡಿಯಬೇಕು ಎಂದು ಆ ಭಾಗದ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಸಕ್ರೆಬೈಲು ಆನೆ ಬಿಡಾರದಿಂದ ಮೂರು ಆನೆಗಳು ಬೆಳಿಗ್ಗೆಯಿಂದಲೇ ಕಾರ್ಯಚರಣೆ ನಡೆಸಿದದವು.</p>.<p>ಆನೆಗಳಾದ ಸಾಗರ, ನಾಗಣ್ಣ, ಬಾಲಣ್ಣ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ. ಕಡೇಕಲ್ಲು ಭಾಗದಿಂದಕಾಡಾನೆಗಳ ಹುಡುಕಾಟ ಆರಂಭಿಸಲಾಗಿದೆ. ಕಡೇಕಲ್ಲು ಗ್ರಾಮದ ಹೊರ ಭಾಗದ ಅರಣ್ಯದಲ್ಲಿ ಕ್ಯಾಂಪ್ ಹಾಕಲಾಗಿದೆ. ಸದ್ಯ ಆನೆಯನ್ನು ಈ ಭಾಗದಿಂದ ಹಿಮ್ಮೆಟ್ಟಿಸಲು ಆದ್ಯತೆ ನೀಡಲಾಗುವುದು. ಸಾಧ್ಯವಾಗದಿದ್ದರೆ ಸೆರೆ ಹಿಡಿಯಲಾಗುವುದು ಎಂದು ಬಿಡಾರದ ಅಧಿಕಾರಿಗಳು ಮಾಹಿತಿ ನೀಡಿದರು.</p>.<p>ಈ ಆನೆಯ ಕಾವಾಡಿ, ಮಾವುತರು ಹಾಗೂ ಸಹಾಯಕರು ಕಾರ್ಯಾಚರಣೆಯಲ್ಲಿದ್ದಾರೆ. ಸಕ್ರೆಬೈಲು ಆನೆ ಬಿಡಾರದ ಡಾ.ವಿನಯ್ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ಉಂಬ್ಳೆಬೈಲು ಸುತ್ತಮುತ್ತಲಿನ ಕೃಷಿ ಭೂಮಿಗೆ ನುಗ್ಗಿ ರೈತರ ಫಸಲು ನಾಶ ಮಾಡುತ್ತಿದ್ದ ಕಾಡಾನೆ ಸೆರೆಗೆ ಸಕ್ರೆಬೈಲಿನ ಆನೆಗಳು ಬುಧವಾರ ಕಾರ್ಯಚರಣೆ ನಡೆಸಿದವು.</p>.<p>ಕಾಡಾನೆಗಳುಉಂಬ್ಳೆಬೈಲು ಸುತ್ತಮುತ್ತ ಕಾಡಂಚಿನ ಕೃಷಿ ಭೂಮಿಗೆ ಬಂದು ಬೆಳೆ ನಾಶ ಮಾಡುತ್ತಿವೆ. ಆನೆಗಳನ್ನು ಹಿಡಿಯಬೇಕು ಎಂದು ಆ ಭಾಗದ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಸಕ್ರೆಬೈಲು ಆನೆ ಬಿಡಾರದಿಂದ ಮೂರು ಆನೆಗಳು ಬೆಳಿಗ್ಗೆಯಿಂದಲೇ ಕಾರ್ಯಚರಣೆ ನಡೆಸಿದದವು.</p>.<p>ಆನೆಗಳಾದ ಸಾಗರ, ನಾಗಣ್ಣ, ಬಾಲಣ್ಣ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ. ಕಡೇಕಲ್ಲು ಭಾಗದಿಂದಕಾಡಾನೆಗಳ ಹುಡುಕಾಟ ಆರಂಭಿಸಲಾಗಿದೆ. ಕಡೇಕಲ್ಲು ಗ್ರಾಮದ ಹೊರ ಭಾಗದ ಅರಣ್ಯದಲ್ಲಿ ಕ್ಯಾಂಪ್ ಹಾಕಲಾಗಿದೆ. ಸದ್ಯ ಆನೆಯನ್ನು ಈ ಭಾಗದಿಂದ ಹಿಮ್ಮೆಟ್ಟಿಸಲು ಆದ್ಯತೆ ನೀಡಲಾಗುವುದು. ಸಾಧ್ಯವಾಗದಿದ್ದರೆ ಸೆರೆ ಹಿಡಿಯಲಾಗುವುದು ಎಂದು ಬಿಡಾರದ ಅಧಿಕಾರಿಗಳು ಮಾಹಿತಿ ನೀಡಿದರು.</p>.<p>ಈ ಆನೆಯ ಕಾವಾಡಿ, ಮಾವುತರು ಹಾಗೂ ಸಹಾಯಕರು ಕಾರ್ಯಾಚರಣೆಯಲ್ಲಿದ್ದಾರೆ. ಸಕ್ರೆಬೈಲು ಆನೆ ಬಿಡಾರದ ಡಾ.ವಿನಯ್ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>