ಆನೆಗಳಾದ ಸಾಗರ, ನಾಗಣ್ಣ, ಬಾಲಣ್ಣ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ. ಕಡೇಕಲ್ಲು ಭಾಗದಿಂದಕಾಡಾನೆಗಳ ಹುಡುಕಾಟ ಆರಂಭಿಸಲಾಗಿದೆ. ಕಡೇಕಲ್ಲು ಗ್ರಾಮದ ಹೊರ ಭಾಗದ ಅರಣ್ಯದಲ್ಲಿ ಕ್ಯಾಂಪ್ ಹಾಕಲಾಗಿದೆ. ಸದ್ಯ ಆನೆಯನ್ನು ಈ ಭಾಗದಿಂದ ಹಿಮ್ಮೆಟ್ಟಿಸಲು ಆದ್ಯತೆ ನೀಡಲಾಗುವುದು. ಸಾಧ್ಯವಾಗದಿದ್ದರೆ ಸೆರೆ ಹಿಡಿಯಲಾಗುವುದು ಎಂದು ಬಿಡಾರದ ಅಧಿಕಾರಿಗಳು ಮಾಹಿತಿ ನೀಡಿದರು.