ಸಂಜೆ ಗ್ರಾಮದ ಮಾರಿಕಾಂಬಾ ದೇವಾಲಯದ ಮುಂಭಾಗದಿಂದ ಗ್ರಾಮದ ಎಲ್ಲ ಜಾನುವಾರನ್ನು ಕರೆತಂದರು. ಹಸು, ಕರು ಮತ್ತು ಎತ್ತುಗಳಿಗೆ ಮಾತ್ರ ಪ್ರವೇಶವಿದ್ದು, ಕೋಣಗಳಿಗೆ ಪ್ರವೇಶ ಇಲ್ಲ. ಹೀಗೆ ಸಾಲಾಗಿ ಸಾಗಿ ಬಂದ ಹಸು-ಕರು ಎತ್ತುಗಳಿಗೆ ಮಾರಿಕಲ್ಲು ಭೂತರಾಯನ ಕಟ್ಟೆಯ ಮುಂಭಾಗದಲ್ಲಿ ಉರುಸಲನ್ನು ಮೈ ಮೇಲೆ ಎರಚಲಾಯಿತು. ಹೀಗೆ ಮಾಡುವುದರಿಂದ ಜಾನುವಾರಿಗೆ ಬರುವ ರೋಗಗಳು ದೂರವಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರದ್ದು.