ಶುಕ್ರವಾರ ಸಂಜೆ ಶುರುವಾಗಿ ರಾತ್ರಿ ಬಿಡುವು ನೀಡಿದ್ದರೂ ಬೆಳಗಿನ ಜಾವ ಮತ್ತೆ ವರುಣ ಆರ್ಭಟಿಸಿದ. ಗುಡುಗು–ಸಿಡಿಲಿನ ಆರ್ಭಟವೂ ಜೋರಾಗಿತ್ತು. ಸಾಗರ ತಾಲ್ಲೂಕಿನ ಆನಂದಪುರ, ಹೊಸನಗರ ತಾಲ್ಲೂಕಿನ ರಿಪ್ಪನ್ಪೇಟೆ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಮಧ್ಯಾಹ್ನದವರೆಗೂ ಮೋಡ ಕವಿದ ವಾತಾವರಣ ಇದ್ದು, ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿದ್ದ ಮಲೆನಾಡಿನ ಜನರಿಗೆ ತಂಪು ವಾತಾವರಣ ಒಡಮೂಡಿ ಮಳೆಗಾಲದ ಅನುಭವವಾಯಿತು.